ಈ ಬಗ್ಗೆ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಟೇಶ್ ಪ್ರತಿಕ್ರಿಯಿಸಿ, ಮೃತ ಹೆಣ್ಣು ಹುಲಿಯ ದೇಹವನ್ನು ಪರಿಶೀಲಿಸಿದಾಗ ಉರುಳಿ ನಿಂದ ಅಥವಾ ವಿಷ ಪ್ರಾಷನದಿಂದ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿಲ್ಲ. ಹುಲಿಯ ದೇಹದ ಮೇಲೆ ಗಾಯಗಳೂ ಕಂಡು ಬಂದಿಲ್ಲ. ಸರಹದ್ದಿಗಾಗಿ ಹೋರಾಟ ನಡೆಸಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಹುಲಿಯ ಸಾವಿಗೆ ನಿಖರ ಕಾರಣವನ್ನು ಪರೀಕ್ಷಾ ವರದಿ ಬಂದ ನಂತರ ಖಚಿತಪಡಿಸಲಾಗುವುದು ಎಂದು ತಿಳಿಸಿದರು.