ರಾಜು ಅವರು ತಿಂಗಳ ಹಿಂದೆ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಬೆಂಗಳೂರಿನ ಮನೇಶ್ ಎಂಬುವವರಿಗೆ ನಕಲಿ ನಾಗಮಣಿ ಮಾರಾಟ ಮಾಡಿದ್ದರು. ಚಾರ್ಜರ್ ಲೈಟ್ ಅಳವಡಿಸಿದ್ದ ಸಣ್ಣ ಮರದ ಪೆಟ್ಟಿಗೆಯ ಒಳಗೆ ಹತ್ತಿ ತುಂಬಿ ಅದರೊಳಗೆ ಹೊಳೆಯುವ ಹರಳು ಇಟ್ಟು ನಾಗಮಣಿ ಎಂದು ನಂಬಿಸಿದ್ದರು. ಅಲ್ಲದೇ ಮನೇಶ್ ಅವರಿಂದ ₹30 ಲಕ್ಷ ಹಣವನ್ನೂ ಪಡೆದಿದ್ದರು. ಕೆಲವು ದಿನಗಳ ಬಳಿಕ ಮನೇಶ್ಗೆ ತಾನು ಮೋಸ ಹೋಗಿದ್ದು ಗೊತ್ತಾಗಿ, ಇದೇ 26ರಂದು ರಾಮಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.