ಜಿಲ್ಲೆಯ ನಾನಾ ಭಾಗಗಳಿಂದ ಬರುವ ಭಕ್ತರು ಮಹಾನವಮಿಯಂದು ತಾವು ಬೆಳೆದ ಮೊದಲ ದವಸ ಧಾನ್ಯಗಳನ್ನು ಮುಡಿಪಾಗಿಟ್ಟು ದಾಸೋಹಕ್ಕೆ ನೀಡಿ ಪ್ರಸಾದವನ್ನು ಸ್ವೀಕರಿಸುತ್ತಾರೆ. ರಾತ್ರಿ ದೇವಾಲಯದ ಆವರಣದಲ್ಲೇ ತಂಗಿದ್ದು, ವಿಜಯ ಧಶಮಿಯಂದು ಜರುಗುವ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಬುಧವಾರ ರಾತ್ರಿ ನಡೆದ ಚಿನ್ನದ ತೇರಿನ ಉತ್ಸವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.