ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಕಾವೇರಿ ವನ್ಯಧಾಮದಲ್ಲಿ ತೋಳ ಪತ್ತೆ, ಜಿಲ್ಲೆಯಲ್ಲೇ ಮೊದಲು

ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾದ ಪ್ರಾಣಿ
Last Updated 9 ಮೇ 2020, 17:51 IST
ಅಕ್ಷರ ಗಾತ್ರ

ಚಾಮರಾಜನಗರ: ಕಾವೇರಿ ವನ್ಯಜೀವಿ ಧಾಮದಲ್ಲಿ ಮೊದಲ ಬಾರಿಗೆ ತೋಳದ ಇರುವಿಕೆ ಪತ್ತೆಯಾಗಿದೆ. ಚಾಮರಾಜ
ನಗರ ಜಿಲ್ಲೆಯಲ್ಲಿ ಈ ಪ್ರಾಣಿ ಕಂಡು ಬಂದಿರುವುದು ಇದೇ ಮೊದಲು.

ಚಿರತೆಗಳ ಅಧ್ಯಯನಕ್ಕಾಗಿವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ನೇತೃತ್ವದ, ನೇಚರ್‌ ಕನ್ಸರ್ವೇಷನ್‌ ಫೌಂಡೇಷನ್‌ ತಂಡದವರು ವನ್ಯ
ಧಾಮದ ಕೊತ್ತನೂರು ವಲಯದ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಏಪ್ರಿಲ್‌ 7ರ ಮುಂಜಾನೆ ತೋಳವೊಂದರ ಚಿತ್ರ ಸೆರೆಯಾಗಿದೆ.

ತೋಳಗಳು ಸಾಮಾನ್ಯವಾಗಿ ಒಣಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ರಾಜ್ಯದ ಹಾವೇರಿ, ಕೊಪ್ಪಳ, ತುಮಕೂರು, ರಾಯಚೂರು, ಬಳ್ಳಾರಿ ಮತ್ತಿತರ ಜಿಲ್ಲೆಗಳಲ್ಲಿ ಕಂಡುಬರುತ್ತವೆ. ಒಣ ಹುಲ್ಲುಗಾವಲು, ಕುರುಚಲು ಕಾಡುಗಳಲ್ಲಿ ಕಂಡು ಬರುವ ತೋಳಗಳು, ಅಪರೂಪವಾಗಿ ಎಲೆ ಉದುರುವ ಕಾಡುಗಳಲ್ಲೂ ಜೀವಿಸುತ್ತವೆ. ಭಾರತದಲ್ಲಿ ಇವುಗಳ ಸಂಖ್ಯೆ ಹುಲಿಗಳಿಗಿಂತಲೂ ಕಡಿಮೆಯಿದೆ ಎಂದು ಅಂದಾಜಿಸಲಾಗಿದೆ.

‘ಜಿಲ್ಲೆವ್ಯಾಪ್ತಿಯಕಾವೇರಿಮತ್ತು ಮಲೆ ಮಹದೇಶ್ವರ ವನ್ಯಧಾಮ, ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಈ ಹಿಂದೆ ನಡೆದಿದ್ದ ಅಧ್ಯಯನಗಳಲ್ಲಿ ತೋಳಗಳ ಇರುವಿಕೆ ದಾಖಲಾಗಿಲ್ಲ. ದಕ್ಷಿಣಭಾರತದಲ್ಲೇ ನಾಯಿಜಾತಿಗೆ ಸೇರಿರುವಎಲ್ಲ ನಾಲ್ಕುಪ್ರಭೇದಗಳ (ಸೀಳುನಾಯಿ, ತೋಳ, ಗುಳ್ಳೆನರಿ, ಮತ್ತು
ಕಪ್ಪಲುನರಿ) ವನ್ಯಜೀವಿಗಳು ಚಾಮರಾಜನಗರಜಿಲ್ಲೆಯಲ್ಲಿ ಕಂಡು ಬಂದಿವೆ’ ಎಂದು ಸಂಜಯ್‌ ಗುಬ್ಬಿ ‘ಪ್ರಜಾವಾಣಿ’ಗೆ ತಿಳಿಸಿದರು.

ಇದರೊಂದಿಗೆ ಹುಲಿ, ಸೀಳುನಾಯಿ, ತೋಳಗಳು ಒಂದೇ ಕಡೆ ಆವಾಸ ಸ್ಥಾನ ಹೊಂದಿರುವ ಏಕೈಕ ಜಿಲ್ಲೆ ಹೆಗ್ಗಳಿಕೆಗೂ ಚಾಮರಾಜನಗರ ಪಾತ್ರವಾಗಿದೆ. ಈ ಎಲ್ಲಾ ಪ್ರಾಣಿಗಳು ಒಂದೇ ಬಗೆಯ ಬಲಿ ಪ್ರಾಣಿ (ಚುಕ್ಕೆ ಜಿಂಕೆ, ಸಾರಂಗ)ಯನ್ನು ಅವಲಂ
ಭಿಸಿವೆ.ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಮೂರು ಪ್ರಾಣಿಗಳು ಕಂಡು ಬಂದಿವೆ. ಆದರೆ ಒಂದೇ ಕಡೆ ಇಲ್ಲ. ಮದ್ದೋಡಿಯಲ್ಲಿ ಹುಲಿ, ಸೀಳುನಾಯಿ ಇದ್ದರೆ, ಕಡೂರಿನಲ್ಲಿ ತೋಳಗಳಿವೆ’ ಎಂದು ಮಾಹಿತಿ ನೀಡಿದರು.

ಅಧ್ಯಯನತಂಡದಲ್ಲಿ ಸಂದೇಶ್ ಅಪ್ಪುನಾಯ್ಕ್,ಗಿರೀಶ್ಎಂ.ಎನ್.,ಜ್ಞಾನೇಂದ್ರ,ಪೂರ್ಣೇಶ ಎಚ್‌.ಸಿ. ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT