ಕೆರೆ; ನಿರ್ವಹಣೆ ಕೊರತೆ: ಕೃಷಿ ಅಧಿಕಾರಿ
ತಾಲೂಕಿನಲ್ಲಿ 28 ಗ್ರಾಮಗಳಿಗೂ ಮೈಸೂರು ಅರಸರ ಕಾಲದಲ್ಲಿ ಕೆರೆಗಳು ನಿರ್ಮಾಣವಾಗಿವೆ. ಕಾಲುವೆಯಲ್ಲಿ ನೀರು ಬಂದಾಗ ಎಲ್ಲವುಗಳಿಗೂ ನೀರು ತುಂಬಿಸಲಾಗುತ್ತದೆ. ಆದರೆ, ಕೆಲವು ಕೆರೆಗಳಲ್ಲಿ ಹೂಳು ತುಂಬಿಕೊಂಡು ನೀರಿನ ನಿರ್ವಹಣೆ ಇಲ್ಲದ ಪರಿಣಾಮ, ಕೆರೆಗಳಲ್ಲಿ ವರ್ಷ ಪೂರ್ತಿ ನೀರು ಶೇಖರಣೆ ಆಗುವುದಿಲ್ಲ. ಹೀಗಾಗಿ ಕೊಳವೆ ಬಾವಿಗಳಲ್ಲಿ ಅಂತರ್ಜಲದ ಪ್ರಮಾಣವು ಕುಸಿಯುತ್ತದೆ. ಈ ದೆಸೆಯಲ್ಲಿ ಬೇಸಿಗೆ ಬೆಳೆ ಹೊನ್ನೂರು ಸುತ್ತಲಿನ ಗ್ರಾಮಗಳಿಗೆ ಸೀಮಿತವಾಗಿದೆ ಎನ್ನುತ್ತಾರೆ ಕೃಷಿ ಅಧಿಕಾರಿ ಎನ್.ಜಿ.ಅಮೃತೇಶ್ವರ.