<p><strong>ಯಳಂದೂರು</strong>: ‘ಅಂಬೆಡ್ಕರ್ ಚಿಂತನೆ ಮತ್ತು ವೈಜ್ಞಾನಿಕ ನಿಲುವು ಇಂದು ಫಲ ಕೊಡುವ ವೃಕ್ಷಗಳಾಗಿವೆ’ ಎಂದು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀಧರ್ ಅಭಿಪ್ರಾಯಪಟ್ಟರು.</p>.<p>ಪಟ್ಟಣದ ಬಳೆಪೇಟೆಯಲ್ಲಿ ಶನಿವಾರ ನಡೆದ ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಬುದ್ಧನ ಶಾಂತಚಿತ್ತತೆ, ವಿಜ್ಞಾನದ ದೃಢತೆ, ಮೌಢ್ಯತೆ ಅಪಾಯಗಳ ಬಗ್ಗೆ ಅಂಬೇಡ್ಕರ್ ಅವರಿಗೆ ಇದ್ದ ಜ್ಞಾನ ಅಪರಿಮಿತವಾಗಿತ್ತು. ಬಹು ಜನರ ಉದ್ಧಾರ ಕಲಿಕೆಯಿಂದ ಮಾತ್ರ ಸಾಧ್ಯ ಎಂಬುದರ ಅರಿವಿದ್ದ ಅವರು ಅಸ್ಪೃಶ್ಯರ ಮನೋಧೋರಣೆಯಲ್ಲಿ ಬದಲಾವಣೆ ತರಲು ಜೀವನ ಪೂರ್ತಿ ಶ್ರಮಿಸಿದರು’ ಎಂದರು.</p>.<p>ಭಾಷಣಕಾರ ಕಾಡಹಳ್ಳಿ ಮಹೇಂದ್ರ ಮಾತನಾಡಿ, ‘ಅಂಬೇಡ್ಕರ್ ಜೀವನವೇ ನಮಗೆ ಸಂದೇಶ ಆಗಿದೆ. ಅವರ ಭಾಷಣ ಮತ್ತು ಗ್ರಂಥಗಳನ್ನು ಅಧ್ಯಯನ ಮಾಡಿದರೆ ಅವರ ಚಿಂತನೆ ಮತ್ತು ಜ್ಞಾನ ದಿಗಂತದ ಅರಿವು ಆಗಲಿದೆ’ ಎಂದರು.</p>.<p>ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.</p>.<p>ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ನಂಜುಂಡಯ್ಯ, ಯಜಮಾನರಾದ ಶ್ರೀನಿವಾಸ್, ರೇವಣ್ಣ, ಪ್ರಕಾಶ್, ವೆಂಕಟ ರಾಮಯ್ಯ, ಮುಖಂಡರಾದ ಲಿಂಗರಾಜು ಮೂರ್ತಿ, ವರದರಾಜ್, ಸಾಹಿತಿ ಪ್ರಕಾಶ್, ಅಂಬೇಡ್ಕರ್ ಸೇನೆಯ ಅಧ್ಯಕ್ಷ ಗಂಗಾಧರ್ ಹಾಗೂ ಸದಸ್ಯರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260531-37-1546036363</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು</strong>: ‘ಅಂಬೆಡ್ಕರ್ ಚಿಂತನೆ ಮತ್ತು ವೈಜ್ಞಾನಿಕ ನಿಲುವು ಇಂದು ಫಲ ಕೊಡುವ ವೃಕ್ಷಗಳಾಗಿವೆ’ ಎಂದು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀಧರ್ ಅಭಿಪ್ರಾಯಪಟ್ಟರು.</p>.<p>ಪಟ್ಟಣದ ಬಳೆಪೇಟೆಯಲ್ಲಿ ಶನಿವಾರ ನಡೆದ ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಬುದ್ಧನ ಶಾಂತಚಿತ್ತತೆ, ವಿಜ್ಞಾನದ ದೃಢತೆ, ಮೌಢ್ಯತೆ ಅಪಾಯಗಳ ಬಗ್ಗೆ ಅಂಬೇಡ್ಕರ್ ಅವರಿಗೆ ಇದ್ದ ಜ್ಞಾನ ಅಪರಿಮಿತವಾಗಿತ್ತು. ಬಹು ಜನರ ಉದ್ಧಾರ ಕಲಿಕೆಯಿಂದ ಮಾತ್ರ ಸಾಧ್ಯ ಎಂಬುದರ ಅರಿವಿದ್ದ ಅವರು ಅಸ್ಪೃಶ್ಯರ ಮನೋಧೋರಣೆಯಲ್ಲಿ ಬದಲಾವಣೆ ತರಲು ಜೀವನ ಪೂರ್ತಿ ಶ್ರಮಿಸಿದರು’ ಎಂದರು.</p>.<p>ಭಾಷಣಕಾರ ಕಾಡಹಳ್ಳಿ ಮಹೇಂದ್ರ ಮಾತನಾಡಿ, ‘ಅಂಬೇಡ್ಕರ್ ಜೀವನವೇ ನಮಗೆ ಸಂದೇಶ ಆಗಿದೆ. ಅವರ ಭಾಷಣ ಮತ್ತು ಗ್ರಂಥಗಳನ್ನು ಅಧ್ಯಯನ ಮಾಡಿದರೆ ಅವರ ಚಿಂತನೆ ಮತ್ತು ಜ್ಞಾನ ದಿಗಂತದ ಅರಿವು ಆಗಲಿದೆ’ ಎಂದರು.</p>.<p>ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.</p>.<p>ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ನಂಜುಂಡಯ್ಯ, ಯಜಮಾನರಾದ ಶ್ರೀನಿವಾಸ್, ರೇವಣ್ಣ, ಪ್ರಕಾಶ್, ವೆಂಕಟ ರಾಮಯ್ಯ, ಮುಖಂಡರಾದ ಲಿಂಗರಾಜು ಮೂರ್ತಿ, ವರದರಾಜ್, ಸಾಹಿತಿ ಪ್ರಕಾಶ್, ಅಂಬೇಡ್ಕರ್ ಸೇನೆಯ ಅಧ್ಯಕ್ಷ ಗಂಗಾಧರ್ ಹಾಗೂ ಸದಸ್ಯರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260531-37-1546036363</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>