ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೆ ಬೆಂಗಳೂರಲ್ಲಿ ಸುಮಾರು 300-350 ಕೆರೆಗಳಿದ್ದವು. ಆದರೆ ಕಾಲ ಕ್ರಮೇಣ ವಿವಿಧ ಕಾರಣಕ್ಕೆ ನಮ್ಮ ಪೂರ್ವಜರು ನಿರ್ಮಿಸಿದ ಕೆರೆಗಳನ್ನು ಕಳೆದುಕೊಂಡಿದ್ದೇವೆ. ಈಗ ಉಳಿದಿರುವ ಕೆರೆಗಳ ರಕ್ಷಣೆಗೆ ಆದ್ಯತೆ ನೀಡಬೇಕಿದೆ. ಹಾಗಾಗಿ ಹೆಚ್ಚು ಕೆರೆಗಳಿಗೆ ಎಸ್ಟಿಪಿ (ತ್ಯಾಜ್ಯ ನೀರು ಸಂಸ್ಕರಣಾ ಘಟಕ) ಅಳವಡಿಸಬೇಕೆಂದು ಹೇಳಿದ್ದೇನೆ. ಕಗ್ಗದಾಸಪುರದಲ್ಲಿ ಎಸ್ಟಿಪಿ ಸ್ಥಾಪಿಸಲು ಜಾಗ ಹುಡುಕಾಟ ನಡೆದಿದೆ. ಎಲ್ಲ ಕಡೆಯೂ ಎಸ್ಟಿಪಿ ಸ್ಥಾಪಿಸಿ ಕೊಳಚೆ ನೀರು ಸಂಸ್ಕರಿಸಿ ಶುದ್ಧ ನೀರನ್ನು ಬಳಸಿಕೊಳ್ಳಬೇಕಿದೆ ಎಂದರು.