ಆಲಪುಳ: ಕಾಂಗ್ರೆಸ್ ಕಾರ್ಯಕರ್ತ ದಿವಾಕರನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯ, ಸಿಪಿಎಂನ ಮಾಜಿ ನಾಯಕ ಆರ್.ಬೈಜುಗೆ ಮರಣದಂಡನೆ ಮತ್ತು ಇತರೆ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಆಲಪುಳ ತ್ವರಿತ ವಿಲೇವಾರಿ ನ್ಯಾಯಾಲಯದ ನ್ಯಾಯಾಧೀಶ ಅನಿಲ್ಕುಮಾರ್ ಅವರು ಶನಿವಾರ ಶಿಕ್ಷೆ ಪ್ರಕಟಿಸಿದರು. ಬೈಜು ಪ್ರಕರಣದ ಮುಖ್ಯ ಆರೋಪಿ ಎಂದು ಹೇಳಿದರು.