ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಘು ಮಾತನಾಡಿ, ಸಂಗೀತ, ನೃತ್ಯ,ನಾಟಕ, ಕ್ರೀಡೆಗಳಿಗೆ ಓದಿನಷ್ಟೇ ಮಹತ್ವ ನೀಡಬೇಕು ಎಂದರು. ಪುರಸಭೆ ಸದಸ್ಯೆ ಸುನಿತಾ ನಾಗರಾಜು, ಮುಖಂಡರಾದ ವಿಜಯಕುಮಾರ್, ಪುರುಷೋತ್ತಮ್, ರಾಜಶೇಖರ್, ಸಂಸ್ಥೆಯ ಆಡಳಿತಾಧಿಕಾರಿ ವರಲಕ್ಷ್ಮೀ,ಕೆ.ಟಿ, ಮುಖ್ಯಶಿಕ್ಷಕ ನರಸಿಂಹಯ್ಯ ಜಿ.ಮಾತನಾಡಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಂತರ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.