‘ಉತ್ಸವದ ತಯಾರಿಗೆ ₹ 250 ಕೋಟಿ ಅನುದಾನ ನೀಡಿದ ನಮ್ಮ ನೆಚ್ಚಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆದರದ ಸ್ವಾಗತ’ ಎಂದು ಸಚಿವರು ಹೇಳಿದರು. ಆಗ ‘ಮುಖ್ಯಮಂತ್ರಿ ಎಲ್ಲಿದ್ದಾರೆ’ ಎಂದು ಸಭಿಕರು ಅವಾಕ್ಕಾಗಿ ನೋಡಿದರು. ಸಭೆಯಲ್ಲಿ ಇಲ್ಲದಿದ್ದ ದೇವೇಗೌಡರನ್ನೂ ಸ್ವಾಗತಿಸಿದ ಸಚಿವರು ಎಲ್ಲರಲ್ಲೂ ಸೋಜಿಗ ಉಂಟುಮಾಡಿದರು.