ಈ ಔತಣಕೂಟವನ್ನು ಏರ್ಪಡಿಸಿದ್ದು ರಾಜಕೀಯ ಮುಖಂಡ ಮತ್ತು ಸರ್ಕಾರಿ ಸ್ವಾಮ್ಯದ ಮಂಡಳಿಯೊಂದರ ಮುಖ್ಯಸ್ಥರು. ಇವರು ಚುನಾವಣಾ ನೀತಿಸಂಹಿತೆಯ ವ್ಯಾಪ್ತಿಗೆ ಬರುವವರೇ. ಆದ್ದರಿಂದ ಚುನಾವಣೆಯ ಸಂದರ್ಭದಲ್ಲಿ ಈ ರೀತಿ ಔತಣ ಕೂಟವನ್ನು ಏರ್ಪಡಿಸಿದ್ದು ಕಾನೂನಿನ ದೃಷ್ಟಿಯಲ್ಲಿ ತಪ್ಪು. ಆದರೆ ನೀತಿ ಸಂಹಿತೆ ಜಾರಿ ಮಾಡುವವರು ಸಂದರ್ಭ–ಸನ್ನಿವೇಶ, ಸತ್ಯಗಳನ್ನು ಪರಿಗಣಿಸುವ ವಿವೇಕವನ್ನು ತೋರಿಸಬಾರದೇ?