‘ಬಿಜೆಪಿಯನ್ನು ಎದುರಿಸಲು ಹಾವು, ಮುಂಗುಸಿ, ನಾಯಿ, ಬೆಕ್ಕು ಒಂದಾಗುತ್ತಿವೆ’ ಎಂದಿದ್ದಾರೆ ಅಮಿತ್ ಶಾ (ಪ್ರ.ವಾ. ಏ.2). ತಕ್ಷಣವೇ ನನಗೆ 40 ವರ್ಷದ ಹಿಂದೆ ಇಂದಿರಾ ಗಾಂಧಿ ಆಡಿದ ಮಾತುಗಳು ನೆನಪಿಗೆ ಬಂದವು. ಇಂದಿರಾ ಗಾಂಧಿ ಅವರು ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳದೆ ಸರ್ವಾಧಿಕಾರಿಯಾಗಿ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಅದರ ಕೆಟ್ಟ ಪರಿಣಾಮಗಳೆಲ್ಲ ಇತಿಹಾಸ ಸೇರಿವೆ. ಆಗ ಲೋಕನಾಯಕ ಜೆ.ಪಿ. ಅಂದಿನ ವಿರೋಧಿ ಪಕ್ಷಗಳನ್ನೆಲ್ಲ ಒಗ್ಗೂಡಿಸಿ ಜನತಾ ಪಕ್ಷ ಕಟ್ಟಿ ಇಂದಿರಾ ವಿರುದ್ಧ ಹೋರಾಡಿ ಜಯ ಗಳಿಸಿದರು.