ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಮಹೋತ್ಸವ ಕ್ಷಣಗಣನೆ ಆರಂಭವಾಗಿದೆ. ಉಪನಗರಗಳ ಕೀ ಹಸ್ತಾಂತರಿಸಿರುವುದು ಸಂತೋಷದ ವಿಷಯ. ಈಗಾಗಲೇ ತ್ಯಾಗಿ ನಗರದಲ್ಲಿ ಆಚಾರ್ಯರು, ಮುನಿಗಳು ಮಾತಾಜಿಗಳ ಸೇರಿದಂತೆ ಸುಮಾರು 310 ತ್ಯಾಗಿಗಳು ವಾಸ್ತವ್ಯ ಹೂಡಿದ್ದಾರೆ. ತ್ಯಾಗಿ ನಗರ ಬಹುತೇಕ ಭರ್ತಿಯಾಗಿದ್ದು, ತ್ಯಾಗಿಗಳನ್ನು ಸ್ವಾಗತಿಸಿದ ಬಳಿಕ ನಗರಕ್ಕೆ ಬಿಡಲಾಗುತ್ತಿದೆ ಎಂದು ತಿಳಿಸಿದರು.