*
ಚುನಾವಣೆ ಒಂದು ರೀತಿಯ ಬಾಳೆಎಲೆಯಲ್ಲಿ ಹಾಕಿರುವ ಊಟ ಇದ್ದಂತೆ. ಅಲ್ಲಿ ಧರ್ಮ ಅನ್ನುವ ಕೋಸಂಬರಿ, ಜಾತಿ ಅನ್ನುವ ಹಪ್ಪಳ, ರಾಷ್ಟ್ರೀಯ ವಿಷಯಗಳು ಅನ್ನುವ ಉಪ್ಪಿನಕಾಯಿ ಎಲ್ಲವೂ ಇರಲಿ, ತೊಂದರೆ ಇಲ್ಲ. ಆದರೆ ಊಟಕ್ಕೆ ಮುಖ್ಯವಾದದ್ದು ಇದಾವುದೂ ಅಲ್ಲ, ಅದು ಜನರ ಮೂಲಭೂತ ಅಗತ್ಯಗಳಾದ ನೀರು, ಆರೋಗ್ಯ, ಶಿಕ್ಷಣ, ಉದ್ಯೋಗ, ನೆಮ್ಮದಿಯ ಬದುಕನ್ನು ಒಳಗೊಂಡ ಅನ್ನ, ಸಾರು, ಪಲ್ಯ. ಹೀಗಾಗಿ, ಈ ಬಾರಿಯ ಚುನಾವಣೆಯಲ್ಲಿ ಸೈಡ್ ಡಿಶ್ ಅಲ್ಲಿ ಕಳೆದು ಹೋಗದೆ, ಮೇನ್ ಕೋರ್ಸ್ ಏನು ಅನ್ನುವುದನ್ನು ನೆನಪಿಟ್ಟುಕೊಂಡು ಮತ ಹಾಕಿ.
-ವಸಂತ್ ಶೆಟ್ಟಿ, @vasantshetty81