ಬೆಂಗಳೂರು: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜೆಡಿಯು ಪಕ್ಷದ ಅಭ್ಯರ್ಥಿ ಮಹಿಮ ಪಟೇಲ್ ಪರ ಚನ್ನಗಿರಿಯಲ್ಲಿ ಭಾನುವಾರ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಈ ಕುರಿತು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜೆಡಿಯು ರಾಜ್ಯ ಯುವ ಘಟಕದ ಅಧ್ಯಕ್ಷ ಕೆ.ವಿ ಶಿವರಾಂ, ‘ಬೆಂಗಳೂರಿಗೆ ವಿಮಾ
ನದಲ್ಲಿ ಬರುವ ಅವರು ಇಲ್ಲಿಂದ ತುಮಕೂರಿಗೆ ತೆರಳಿ ಶಿವಕುಮಾರಸ್ವಾಮಿ ಅವರ ದರ್ಶನ ಪಡೆಯಲಿದ್ದಾರೆ. ನಂತರ ನೇರವಾಗಿ ಚನ್ನಗಿರಿ ತಲುಪಲಿದ್ದಾರೆ’ ಎಂದರು.