‘ಚುನಾವಣೆ ಬಂದಾಗ ಮಾತ್ರ ನಮ್ಮ ನೆನಪು ಉಂಟಾಗುತ್ತದೆ. ನಮಗೆ ನೆರವಿನ ಅಗತ್ಯವಿದ್ದಾಗ ನಿಮ್ಮ ಮನೆ ಮುಂದೆ ಬಂದರೆ ನೀವು ಯಾರೂ ಕಾಣಿಸಿಕೊಳ್ಳುವುದಿಲ್ಲ. ಇಷ್ಟು ದಿನಗಳ ಕಾಲ ನಮ್ಮನ್ನು ದೂರವಿಟ್ಟು, ಚುನಾವಣೆ ಬಂದಿದೆ ಎಂದು ಹತ್ತಿರ ಕರೆಯುತ್ತಿದ್ದೀರಿ. ದಲಿತರಿಗೆ ಯಾವುದೇ ರೀತಿಯಲ್ಲೂ ಸಹಾಯ ಮಾಡದೆ ಈಗ ಮತ ಹಾಕುವಂತೆ ಕೇಳುತ್ತಿದ್ದೀರಿ. ವೋಟು ಹಾಕಲಷ್ಟೇ ನಾವು ಬೇಕೇ?’ ಎಂದು ತರಾಟೆಗೆ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ.