ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ಕ್ಷೇತ್ರ: ಕಣದಲ್ಲಿ 203 ಅಭ್ಯರ್ಥಿಗಳು

ಬೆಳಗಾವಿ: ಉಮೇದುವಾರಿಕೆ ವಾಪಸ್‌ ಪಡೆದ 49 ಮಂದಿ
Last Updated 28 ಏಪ್ರಿಲ್ 2018, 6:12 IST
ಅಕ್ಷರ ಗಾತ್ರ

ಬೆಳಗಾವಿ: ಮೇ 12ರಂದು ನಡೆಯುವ ವಿಧಾನಸಭಾ ಚುನಾವಣೆಗೆ ಅಖಾಡಾ ಸಿದ್ಧವಾಗಿದೆ. ಜಿಲ್ಲೆಯ ಎಲ್ಲ 18 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಅಂತಿಮಗೊಂಡಿದೆ. 49 ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದಿದ್ದು, ಕಣದಲ್ಲಿ 203 ಅಭ್ಯರ್ಥಿಗಳು ಉಳಿದಿದ್ದಾರೆ. ಬಹುತೇಕ ಪಕ್ಷೇತರ ಅಭ್ಯರ್ಥಿಗಳೇ ವಾಪಸ್‌ ಪಡೆದಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.

ಅರಬಾವಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಪ್ರಕಾಶ ಸೋನವಾಲ್ಕರ್‌ ವಾಪಸ್‌ ಪಡೆದಿದ್ದಾರೆ. ರಾಯಬಾಗದಲ್ಲಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಮಹಾವೀರ ಮೊಹಿತೆ, ಬೈಲಹೊಂಗಲದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಜಗದೀಶ ಮೆಟಗುಡ್ಡ, ಸವದತ್ತಿಯಲ್ಲಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಆನಂದ ಚೋಪ್ರಾ ಹಾಗೂ ರಾಮದುರ್ಗದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ರಮೇಶ ಚಂದ್ರಯ್ಯ ಪಂಚಕಟ್ಟಿಮಠ ಪಕ್ಷೇತರರಾಗಿ ಕಣದಲ್ಲಿ ಉಳಿದಿದ್ದಾರೆ.

ಕಣದಲ್ಲಿರುವ ಅಭ್ಯರ್ಥಿಗಳು:

ನಿಪ್ಪಾಣಿ: ಕಾಕಾಸಾಹೇಬ ಪಾಂಡುರಂಗ ಪಾಟೀಲ (ಕಾಂಗ್ರೆಸ್‌), ಶಶಿಕಲಾ ಜೊಲ್ಲೆ (ಬಿಜೆಪಿ), ರಮೇಶ ಕಾಮತ್ (ಬಿಎಸ್ಪಿ), ರೋಹಿಣಿ ದೀಕ್ಷಿತ (ಎಐಎಂಇಪಿ), ವಿಜಯಲಕ್ಷ್ಮೀ ಕುರಣೆ (ಆರ್‌ಪಿಐ), ಸಚಿನ್ ಮಧಾಳೆ (ಬಹುಜನ ಮುಕ್ತಿ ಪಾರ್ಟಿ), ಸಂಭಾಜಿ ಥೋರಾತ್, ಅನಿಲ ಕಮತೆ, ಜಯವಂತ ಮಿರಜಕರ, ಶರದ ಪಾಟೀಲ (ಪಕ್ಷೇತರ).

ಚಿಕ್ಕೋಡಿ– ಸದಲಗಾ: ಗಣೇಶ ಪ್ರಕಾಶ ಹುಕ್ಕೇರಿ (ಕಾಂಗ್ರೆಸ್), ಅಣ್ಣಾಸಾಹೇಬ ಜೊಲ್ಲೆ (ಬಿಜೆಪಿ), ಸದಾಶಿವಪ್ಪ ಮಾರುತಿ ವಾಳ್ಕೆ (ಬಿಎಸ್ಪಿ), ಅನ್ನಪೂರ್ಣಾ ಅಸುರ್ಕರ (ಎಐಎಂಇಪಿ), ಅಪ್ಪಾಸಾಹೇಬ್ ಕುರಣೆ (ಆರ್‌ಪಿಐ) ಹಾಗೂ ಜಿತೇಂದ್ರ ನೇರ್ಲೆ, ದಾದಾಸಾಬ ಪಾಟೀಲ, ಮೋಹನ ಮೋಟನ್ನವರ, ಸುನೀಲ ಕೆ.ಖೋತ, ಸೋಮನಾಥ ಹಿರೇಮಠ (ಪಕ್ಷೇತರ).

ಅಥಣಿ: ಮಹೇಶ ಕುಮಠಳ್ಳಿ (ಕಾಂಗ್ರೆಸ್‌), ಲಕ್ಷ್ಮಣ ಸವದಿ (ಬಿಜೆಪಿ), ಗಿರೀಶ ಕೆದರೆಪ್ಪ ಬುಟಾಳಿ (ಜೆಡಿಎಸ್‌), ವಿಠ್ಠಲ ನಿಂಗಪ್ಪಾ ಪೂಜಾರಿ (ನಮ್ಮ ಕಾಂಗ್ರೆಸ್), ಬಸಪ್ಪಾ ಕಲ್ಲಪ್ಪಾ ಹಂಚಿನಾಳ (ಹಿಂದುಸ್ಥಾನಿ ಬಿ.ಜೆ.ಪಿ), ನಿಂಗಪ್ಪಾ ಸುಭಾಶ ಗುರವ, ಅರ್ಜುನ ಭಗವಂತ ಪಾಟೀಲ, ರಾಜೇಶ ಬಾಬು ಶಿಂಗೆ, ಮೆಹೆಬೂಬ ಅಸ್ಲಮ್ ಶೇಖ, ಮಹಾದೇವ ದಶರಥ ಮನೋಜಿ, ಶಿವಮಲ್ಲಪ್ಪಾ ಬಸಪ್ಪಾ ಕುಳಲಿ (ಪಕ್ಷೇತರ).

ಕಾಗವಾಡ: ಶ್ರೀಮಂತ ಪಾಟೀಲ (ಕಾಂಗ್ರೆಸ್‌), ರಾಜು ಕಾಗೆ (ಬಿಜೆಪಿ), ಕಲ್ಲಪ್ಪ ಮಗೆನ್ನವರ (ಜೆಡಿಎಸ್‌), ಬಾಹುಸಾಹೇಬ ಅಶೋಕ ನಾಯಕ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್), ಸಚಿನ ಅಲಗೂರೆ (ಭಾರತೀಯ ರಿಪಬ್ಲಿಕ್ ಪಾರ್ಟಿ), ದಿವಾಕರ ರಾಮಚಂದ್ರ ಪೋತದಾರ (ಸರ್ವ ಜನತಾ ಪಾರ್ಟಿ), ನಾಜೀರಖಾನ್ ಗಾಜಿಅಹಮ್ಮದ ಪಠಾಣ (ಆರ್.ಪಿ.ಐ), ಭೀಮನಗೌಡ ಶಂಕರ ಖೋತ (ಎಂ.ಇ.ಪಿ), ಸಂಜಯ ಹೊನಕಾಂಡೆ (ಜನಸಾಮಾನ್ಯರ ಪಕ್ಷ), ಸರೋಜನಿ ಮಹಾದೇವ ಹರಗೆ (ಜನಹಿತ ಪಕ್ಷ), ಬಾಳಾಸಾಹೇಬ ರಾವಸಾಹೇಬ ರಾವ (ಆಮ ಆದ್ಮಿ), ಗಣೇಶ ಮೋಳೆಕರ, ರಿಜ್ವಾನ ಬಾಳೆಕುಂದ್ರಿ, ಮುರಗೇಪ್ಪಾ ದೇವರಡ್ಡಿ (ಪಕ್ಷೇತರ).

ಕುಡಚಿ: ಅಮಿತ್‌ ಶಾಮ ಘಾಟಗೆ (ಕಾಂಗ್ರೆಸ್‌), ಪಿ.ರಾಜೀವ (ಬಿಜೆಪಿ), ರಾಜೇಂದ್ರ ಅಣ್ಣಪ್ಪ ಐಹೊಳೆ (ಜೆಡಿಎಸ್‌), ಅಣ್ಣಪ್ಪ ಸೋಮಣ್ಣ ಐಗಳಿ (ಇಂಡಿಯನ್‌ ನ್ಯೂ ಕಾಂಗ್ರೆಸ್‌), ಕಿರಣ ಅಜ್ಜಪ್ಪಗೋಳ (ಜನಹಿತ ಪಾರ್ಟಿ), ಥಾವರಸಿಂಗ್ ರಾಠೋಡ (ಶಿವಸೇನಾ), ಪರಶುರಾಮ ಶಿಂಧೆ (ಆರ್‌ಪಿಐ), ರಾಜು ನಿಪ್ಪಾಣಿಕರ, ಸದಾಶಿವ ಮಾಂಗ (ಅಂಬೇಡ್ಕರ ಸಮಾಜ ಪಾರ್ಟಿ), ಸುರೇಂದ್ರ ಉಗಾರೆ (ಬಹುಜನ ಮುಕ್ತಿ ಪಾರ್ಟಿ), ಅಶೋಕ ಗುಪ್ತೆ, ಜಂಗ್ಲು ಅಸೋದೆ, ಜಾಸ್ಮಿನ್ ಸಲಿಮ ಅಲಾಸೆ, ನರಸಪ್ಪ ತುಳಸಿಗೆರಿ, ಯೋಗೇಶ ರೋಡಕರ, ರಾಮಪ್ಪ ಭಜಂತ್ರಿ, ಸಂಗೀತಾ ಕಾಂಬಳೆ, ಸಂಜೀವ ಕಾಂಬಳೆ (ಪಕ್ಷೇತರ), ಸುರೇಶ ಗುರಪ್ಪ ತಳವಾರ (ಕಾಂಗ್ರೆಸ್‌ ಬಂಡಾಯ).

ರಾಯಬಾಗ: ಪ್ರದೀಪಕುಮಾರ ಮಾಳಗಿ (ಕಾಂಗ್ರೆಸ್‌), ಡಿ.ಎಂ. ಐಹೊಳೆ (ಬಿಜೆಪಿ), ನೀಲಪ್ಪ ಗೆಬಡ್ಯಾಗೋಳ (ರಾಷ್ಟ್ರವಾದಿ ಕಾಂಗ್ರೆಸ್), ರಾಜೀವ ಸೋಮಪ್ಪ ಕಾಂಬಳೆ (ಬಿಎಸ್ಪಿ), ತ್ಯಾಗರಾಜ ಕದಂ (ಕರ್ನಾಟಕ ರಾಜ್ಯ ರೈತ ಸಂಘ), ಪ್ರಕಾಶ ಮೈಶಾಳೆ (ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ), ಮಂಜುಳಾ ಅಸೋದೆ (ರಿಪ್ಲಿಕನ್ ಪಾರ್ಟಿ ಆಫ್‌ ಇಂಡಿಯಾ), ಸುರೇಶ ಭೀಮಪ್ಪ ಹೊಸಮನಿ (ಶಿವಸೇನಾ), ಅನಂತಕುಮಾರ ಬ್ಯಾಕೂಡ, ಅಶೋಕ ದಂಡಿನವರ, ಕೆಂಪಯ್ಯ ಮಲ್ಲಯ್ಯ ಹಿರೇಮಠ, ಪ್ರಭಾಕರ ಹನಮಂತ ಗಗ್ಗರಿ, ಭೀಮಸೇನ ಸನದಿ, ರಾಮಣ್ಣ ದತ್ತು ಪಾತ್ರೋಟ (ಪಕ್ಷೇತರ). ಮಹಾವೀರ ಲಕ್ಷ್ಮಣ ಮೊಹಿತೆ (ಕಾಂಗ್ರೆಸ್‌ ಬಂಡಾಯ).

ಹುಕ್ಕೇರಿ: ಎ.ಬಿ. ಪಾಟೀಲ (ಕಾಂಗ್ರೆಸ್‌), ಉಮೇಶ ಕತ್ತಿ (ಬಿಜೆಪಿ), ಮಲ್ಲಿಕಾರ್ಜುನ ಪಾಟೀಲ ಬಾಬಾಗೌಡ (ಜೆಡಿಎಸ್‌). ಗುಡಗನಟ್ಟಿಯ ರಾಮಚಂದ್ರ ಕಮ್ಮಾರ (ಎನ್.ಸಿ.ಪಿ), ಸಂಕೇಶ್ವರದ ಸುಭಾಷ ಕಾಸರಕರ (ಶಿವಸೇನೆ), ಬೋರಗಲ್ಲದ ಸಂಜೀವ
ಮಗದುಮ್ಮ, ಹುಕ್ಕೇರಿಯ ಇಪ್ತಿಕಾರ ಪಿರಜಾದೆ, ಸಂಕೇಶ್ವರದ ಎಚ್. ಗಿರಿರಾಜ, ರಾಮಪ್ಪ ಮಲ್ಲಪ್ಪ ಕುರಬೇಟ, ಹುಕ್ಕೇರಿಯ ಶಹಾಜಹಾನ ಬಡಗಾವಿ, ನಾಗನೂರಿನ ನಜೀರ್ ಅಹ್ಮದ ಮುಲ್ಲಾ (ಪಕ್ಷೇತರರು).

ಅರಬಾವಿ: ಅರವಿಂದ ಮಹಾದೇವರಾವ ದಳವಾಯಿ (ಕಾಂಗ್ರೆಸ್‌). ಬಾಲಚಂದ್ರ ಜಾರಕಿಹೊಳಿ (ಬಿಜೆಪಿ), ಲಕ್ಷ್ಮಣ ಬಸಪ್ಪ ತೊಲಿ (ಶಿವಸೇನಾ), ಭೀಮಪ್ಪ ಗುಂಡಪ್ಪ ಗಡಾದ (ಜೆಡಿಎಸ್‌), ಅಶೋಕ ಪಾಂಡಪ್ಪ ಹಂಜಿ (ಸರ್ವೋದಯ ಜನತಾ ಪಾರ್ಟಿ), ಲಕ್ಷ್ಮಣ ಬಸಪ್ಪ ತೋಳಿ (ಶಿವಸೇನಾ), ಶಂಕರಗೌಡ ನಿಂಗನಗೌಡ ಪಡೆಸರ (ಎಂ.ಇ.ಪಿ.), ಚೂನಪ್ಪ ಉದ್ದಪ್ಪ ಪೂಜೇರಿ (ಪಕ್ಷೇತರ) ಮತ್ತು ಭೀಮಪ್ಪ ಸಿದ್ದಪ್ಪ ನಾಯಿಕ (ಪಕ್ಷೇತರ).

ಗೋಕಾಕ: ರಮೇಶ ಜಾರಕಿಹೊಳಿ (ಕಾಂಗ್ರೆಸ್‌). ಅಶೋಕ ಪೂಜಾರಿ (ಬಿಜೆಪಿ), ಕರೆಪ್ಪ ಲಕ್ಕಪ್ಪ ತಳವಾರ (ಜೆ.ಡಿ.ಎಸ್), ಪರವೀನ ಜಬ್ಬಾರ್ ತಾಂಬೋಳಿ (ಎಂ.ಇ.ಪಿ.), ಇಮಾಮಸಾಬ ಹುಸೇನಸಾಬ ಹಿಡಕಲ್, ಸುರೇಶ ಬಾಬುರಾವ ಪಾಟೀಲ, ಶ್ರೀನಾಥ ಬಾಲಪ್ಪ ಕೌಜಲಗಿ ಮತ್ತು ರಿಯಾಜ್‌ಅಹ್ಮದ್‌ ಅಬ್ದುಲಖಾದರ ಪಟಾದ (ಪಕ್ಷೇತರ).

ಯಮಕನಮರಡಿ: ಸತೀಶ ಜಾರಕಿಹೊಳಿ (ಕಾಂಗ್ರೆಸ್‌), ಮಾರುತಿ ಅಷ್ಟಗಿ (ಬಿಜೆಪಿ), ಗುಡಗನಟ್ಟಿಯ ಶಂಕರ ಭರಮಾ ಗಸ್ತಿ (ಜೆಡಿಎಸ್), ಗೊಡಚನಮಲ್ಕಿಯ ಡಾ. ಯಲಗುಂಡ ಬಸನಾಯಿಕ ನಾಯಿಕ ಮತ್ತು ಕೊಣ್ಣುರಿನ ಭೀಮಸಿ ಸಿದ್ದಪ್ಪ ನಾಯಿಕ (ಪಕ್ಷೇತರರು).

ಖಾನಾಪುರ: ಅಂಜಲಿ ನಿಂಬಾಳ್ಕರ (ಕಾಂಗ್ರೆಸ್‌), ವಿಠ್ಠಲ ಸೋಮಣ್ಣ ಹಲಗೇಕರ (ಬಿಜೆಪಿ), ನಾಸೀರ ಬಾಗವಾನ (ಜೆಡಿಎಸ್‌), ಮೇಘನಾ ದೇಸಾಯಿ (ಎಂ.ಇ.ಪಿ), ಯಶವಂತ ನಿಪ್ಪಾಣಿಕರ (ಇಂಡಿಯನ್ ನ್ಯೂ ಕಾಂಗ್ರೆಸ್), ಜ್ಯೋತಿಬಾ ರೇಮಾಣಿ, ಅರವಿಂದ ಪಾಟೀಲ, ಲಕ್ಷ್ಮಣ ಬನ್ನಾರ, ಕೆ.ಪಿ ಪಾಟೀಲ, ವಿಲಾಸ ಬೆಳಗಾಂವಕರ, ಶ್ರೀಕಾಂತ ಭಜಂತ್ರಿ, ಮಹಾದೇವ ಶಿಂಧೋಳಕರ (ಪಕ್ಷೇತರ).

ಕಿತ್ತೂರು: ಡಿ.ಬಿ. ಇನಾಮದಾರ (ಕಾಂಗ್ರೆಸ್‌), ಮಹಾಂತೇಶ ದೊಡ್ಡಗೌಡರ (ಬಿಜೆಪಿ), ಸುರೇಶ ಮಾರಿಹಾಳ (ಜೆಡಿಎಸ್‌), ಆನಂದ ಈರಪ್ಪ ಹಂಪಣ್ಣವರ (ಆಮ್ ಆದ್ಮಿ), ತಂಗೆವ್ವ ಅಡಿವೆಪ್ಪ ಈರಗಾರ (ಎಂಇಪಿ), ಮಹಾಂತೇಶ ಕೃಷ್ಣ ಹೋಟಕರ್ (ಇಂಡಿಯನ್ ನ್ಯೂ ಕಾಂಗ್ರೆಸ್), ಸಿದ್ದಪ್ಪ ಬಸವಣ್ಣೆಪ್ಪ ಡೊಳ್ಳಿನ (ನಮ್ಮ ಕಾಂಗ್ರೆಸ್), ಬಾಬಾಸಾಹೇಬ ದೇವನಗೌಡ ಪಾಟೀಲ, ಅಶೋಕ ನಾಯಕ, ಬಾಬು ಅಬ್ಬಾಸಲಿ ಹಾಜಿ ಹಾಗೂ ರಾಘವೇಂದ್ರ ವಿಲಾಸ ನಾಯಕ (ಪಕ್ಷೇತರರು).

ಬೈಲಹೊಂಗಲ: ಮಹಾಂತೇಶ ಕೌಜಲಗಿ (ಕಾಂಗ್ರೆಸ್‌), ವಿಶ್ವನಾಥ ಪಾಟೀಲ (ಬಿಜೆಪಿ), ಶಂಕರ ಮಾಡಲಗಿ (ಜೆಡಿಎಸ್‌), ಜಗದೀಶ ಮೆಟಗುಡ್ಡ, ಸುನೀಲ ಗಡ್ಡರಾಯ, ಮಹಾದೇವ ಕರಬಸಣ್ಣವರ (ಪಕ್ಷೇತರ).

ಬೆಳಗಾವಿ ಉತ್ತರ: ಫಿರೋಜ್‌ ಸೇಠ್‌ (ಕಾಂಗ್ರೆಸ್‌), ಅನಿಲ ಬೆನಕೆ (ಬಿಜೆಪಿ), ಫಕ್ರುಸಾಬ ಹಸನಸಾಬ ನದಾಫ (ಎಎಪಿ), ರಹೀಂ ದೊಡಮನಿ (ಎನ್‌ಸಿಪಿ), ಅಶ್ಫಕ್‌ ಮಡಕಿ (ಜೆಡಿಎಸ್‌), ಅಮರಗೋವೆ (ಎಐಎಂಇಪಿ), ರುಶಿದಾ ಬಾನು ನದಾಫ್‌ (ಅಂಬೇಡ್ಕರ ಸಮಾಜ ಪಾರ್ಟಿ), ಗಣೇಶ ಸಿಂಗಣ್ಣವರ (ಆರ್‌ಪಿಐ), ಫಕ್ರುಸಾಬ್‌ ನದಾಫ (ಎಎಪಿ), ಮಹಮದ್‌ ರಸೂಲ್‌ ಬೆಪಾರಿ (ನಮ್ಮ ಕಾಂಗ್ರೆಸ್‌), ಸುವರ್ಣ ದೊಡ್ಡಮನಿ (ಸಾಮಾನ್ಯ ಜನತಾ ಪಾರ್ಟಿ), ಸಂತೋಷ ಕುಮಾರ (ಭಾರತೀಯ ಬಹುಜನ ಕ್ರಾಂತಿದಳ), ಮುಗದುಮ್ ಇಸ್ಮಾಯಿಲ್‌ ಮುಗದುಮ್‌, ಸಂತೋಷ ಬಾವಡೆಕರ, ಬಾಳಾಸಾಹೇಬ ಕಾಕತಿಕರ, ಸಂಭಾಜಿ ಪಾಟೀಲ (ಎಂಇಎಸ್‌).

ಬೆಳಗಾವಿ ದಕ್ಷಿಣ: ಎಂ.ಡಿ. ಲಕ್ಷ್ಮೀನಾರಾಯಣ (ಕಾಂಗ್ರೆಸ್‌), ಅಭಯ ಪಾಟೀಲ (ಬಿಜೆಪಿ), ಸದಾನಂದ ರಾಮಚಂದ್ರ ಮೇತ್ರಿ (ಎಎಪಿ), ಚಾಂಗದೇವ ಕುಗಜಿ (ಜೆಡಿಎಸ್‌). ಮಹಾಂತೇಶ ರಣಗಟ್ಟಿಮಠ (ಎಐಎಂಇಪಿ), ಸದಾನಂದ ಮೇತ್ರಿ (ಎಎಪಿ), ಸ್ನೇಹಾ ಚೋಡಣಕರ (ಅಂಬೇಡ್ಕರ ಸಮಾಜ ಪಾರ್ಟಿ), ಅನಿತಾ ದೊಡಮನಿ, ಕಿರಣ ಸಾಯನಾಕ್‌ (ಎಂಇಎಸ್‌), ಪ್ರಕಾಶ ಮರಗಾಲೆ (ಎಂಇಎಸ್‌), ವಿನಾಯಕ ಜಾಧವ (ಎಂಇಎಸ್‌), ಮರ್ದನ ಗಂಗಯ್‌, ಎನ್‌.ಎಸ್‌ ಶಂಕರಾಚಾರ್ಯ, ಸುಜಿತ್ ಮುಳಗುಂದ (ಪಕ್ಷೇತರ).

ಬೆಳಗಾವಿ ಗ್ರಾಮೀಣ: ಲಕ್ಷ್ಮಿ ಹೆಬ್ಬಾಳಕರ (ಕಾಂಗ್ರೆಸ್‌), ಸಂಜಯ ಪಾಟೀಲ (ಬಿಜೆಪಿ), ಶಿವನಗೌಡ ಪಾಟೀಲ (ಜೆಡಿಎಸ್‌), ಮೋಹನ ಮೋರೆ (ಕಾಂಗ್ರೆಸ್‌ ಬಂಡಾಯ), ಅನ್ವರ ಜಮಾದಾರ (ಎಐಎಂಇಪಿ), ಸದಾನಂದ ಭಾತಕಂಡೆ (ಆರ್‌ಎಸ್‌ಪಿ), ಮನೋಹರ ಕಿಣೇಕರ (ಎಂಇಎಸ್‌), ಮೊಹಮ್ಮದ ರಫೀಕ್‌ ಮುಲ್ಲಾ, ಮೋಹನ ಬೆಳಗುಂದಕರ, ಲಕ್ಷ್ಮಣ ಬರಮನ್ನವರ, ಸತೀಶ ಗುಂಡೇನಟ್ಟಿ, ಯಲ್ಲಪ್ಪ ರಜನೀಶ್‌ (ಪಕ್ಷೇತರ).

ಸವದತ್ತಿ– ಯಲ್ಲಮ್ಮ: ವಿಶ್ವಾಸ ವೈದ್ಯ (ಕಾಂಗ್ರೆಸ್‌), ವಿಶ್ವನಾಥ (ಆನಂದ) ಮಾಮನಿ (ಬಿಜೆಪಿ), ದೊಡಗೌಡ ಪಾಟೀಲ (ಜೆಡಿಎಸ್‌), ಮಹೇಶ ಗುರಪ್ಪ ಅಂಗಡಿ (ಎನ್‌ಸಿಪಿ), ಈಶ್ವರ ಮೆಲಗೇರಿ (ಜನತಾದಳ ಸಂಯುಕ್ತ), ಪಂಚನಗೌಡ ಸಣಗೌರ (ಸಾಮಾನ್ಯ ಜನತಾ ಪಕ್ಷ (ಲೋಕತಾಂತ್ರಿಕ), ಶಮೀರ ಜಮಾದಾರ (ಎಐಡಬ್ಲುಇಪಿ), ಆನಂದ ಚೋಪ್ರಾ, ಡಿ.ಬಿ ನಾಯಕ (ಪಕ್ಷೇತರ).

ರಾಮದುರ್ಗ: ಅಶೋಕ ಪಟ್ಟಣ (ಕಾಂಗ್ರೆಸ್‌), ಮಹಾದೇವಪ್ಪ ಯಾದವಾಡ (ಬಿಜೆಪಿ), ಎಂ.ಜಾವೇದ್‌ಸಾಬ್‌ (ಜೆಡಿಎಸ್‌), ಜಿ.ಎಂ.ಜೈನೇಖಾನ (ಸಿಪಿಐ–ಎಂ), ಸಿದ್ಧಪ್ಪ ಮರಿತಮ್ಮಪ್ಪ ಅಂಗಡಿ (ನ್ಯೂ ಇಂಡಿಯನ್ ಕಾಂಗ್ರೆಸ್ ಪಾರ್ಟಿ), ಸುಭಾಸಚಂದ್ರ ಅಶೋಕ ಘೋಡಕೆ (ಎಂಇಪಿ), ಪಕ್ಷೇತರ ಅಭ್ಯರ್ಥಿಗಳಾಗಿ ಗದಿಗೆಪ್ಪ ರಾಯಪ್ಪ ಬೇಲೂರ, ಭಾರತಿ ಸಂಗಮೇಶ ಚಿಕ್ಕನರಗುಂದ, ಮಾನಿಂಗಪ್ಪ ಫಕೀರಪ್ಪ ಲಕ್ಕನ್ನವರ, ಮುಕಪ್ಪ ಬಸಪ್ಪ ಮುತ್ತಾರಿ, ರಮೇಶ ಚಂದ್ರಯ್ಯ ಪಂಚಕಟ್ಟಿಮಠ, ಸುಧೀರ ಫಕೀರಪ್ಪ ಸಿದ್ದನಕೊಳ್ಳ (ಪಕ್ಷೇತರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT