ಪಾವಗಡ: ತಾಲ್ಲೂಕಿನ ವೆಂಕಟಮ್ಮನಹಳ್ಳಿ ಪ್ರಕರಣದಲ್ಲಿ 12 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಇಬ್ಬರು ಮಾಜಿ ನಕ್ಸಲರನ್ನು ಮಂಗಳವಾರ ಪೊಲೀಸ್ ಅಧಿಕಾರಿಗಳ ತಂಡ ಬಂಧಿಸಿದೆ.
ವೆಂಕಟಮ್ಮನಹಳ್ಳಿ ಪರ್ಗಿ ರಾಜಣ್ಣ (47), ಆರ್.ಅಚ್ಚಮ್ಮನಹಳ್ಳಿಯ ಕೋಟೆ ಶ್ರೀನಿವಾಸ್(55) ಬಂಧಿತರು.
ಫೆಬ್ರುವರಿ-11, 2005 ರಲ್ಲಿ ವೆಂಟಮ್ಮನಹಳ್ಳಿ ಶಾಲೆಯಲ್ಲಿದ್ದ ಪೊಲೀಸ್ ಕ್ಯಾಂಪ್ ಮೇಲೆ ಶಸ್ತ್ರಸಜ್ಜಿತ ನಕ್ಸಲರ ಗುಂಪು ದಾಳಿ ನಡೆಸಿ ಏಳು ಮಂದಿ ಪೊಲೀಸರನ್ನು ಕೊಂದಿತ್ತು. ಒಟ್ಟು 300 ಮಂದಿ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಇವರಿಬ್ಬರು 41, 45ನೇ ಆರೋಪಿಯಾಗಿದ್ದರು.
ಅಂದಿನಿಂದ ತಲೆಮರೆಸಿಕೊಂಡಿದ್ದ ಇವರು ಆಂಧ್ರ, ಬೆಂಗಳೂರು ಸೇರಿ ಹಲವೆಡೆ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.