ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಮಂಗಳವಾರ ಸಮಾಜವಾದಿ ಪಕ್ಷದಿಂದ ಕೆ.ಎಸ್. ಸರಸ್ವತಿ, ಕರ್ನಾಟಕ ಸ್ವಾಭಿಮಾನಿ ರೈತರ ಕಾರ್ಮಿಕರ ಪಕ್ಷದಿಂದ ಜಿ.ಎಸ್. ನಾಗರಾಜ, ಬಿಜೆಪಿಯಿಂದ ಜಿ.ಎಚ್. ತಿಪ್ಪಾರೆಡ್ಡಿ ಎರಡು ನಾಮಪತ್ರ, ಸಾಮಾನ್ಯ ಜನತಾ ಪಾರ್ಟಿಯಿಂದ ಜಗದೀಶ್, ಕಾಂಗ್ರೆಸ್ನಿಂದ ಎಚ್.ಎ. ಷಣ್ಮುಖಪ್ಪ, ಜೆಡಿಎಸ್ನಿಂದ ಕೆ.ಸಿ. ವೀರೇಂದ್ರ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಸೈಯದ್ ಶಹಾಬುದ್ದೀನ್ ಹುಸೇನಿ, ಕೆಜೆಪಿಯಿಂದ ಎಚ್.ಎಂ. ಹನುಮಪ್ಪ, ಪಕ್ಷೇತರರಾಗಿ ಎನ್. ಸುರೇಶ್ , ಎಂ. ಕಿರಣ್, ಗಣೇಶ, ಸಿ. ಶಿವುಯಾದವ್ ನಾಮಪತ್ರ ಸಲ್ಲಿಸಿದ್ದಾರೆ.