ಈ ಬಗ್ಗೆ ಸ್ಪಷ್ಟನೆ ನೀಡಿದ ಅಖಿಲೇಶ್ ಕುಮಾರ್ ಜಾ ಅವರು, ‘ಡುಲ್ಲು ಎಂಬ ಗ್ರಾಮದಲ್ಲಿರುವ ಮುನ್ಶಿ ಮುರ್ಮು ಎಂಬುವವರ ಮನೆಯಲ್ಲಿನ ದನಗಳನ್ನು ಐದು ಮಂದಿ ಮಂಗಳವಾರ ರಾತ್ರಿ ಕದ್ದಿದ್ದರು. ಈ ವಿಷಯ ತಿಳಿದು ಬೆನ್ನಟ್ಟಿದ ಗ್ರಾಮಸ್ಥರು ಬಂಕತಿ ಗ್ರಾಮದಲ್ಲಿ ಸೆರೆಹಿಡಿದು ಹಲ್ಲೆ ಮಾಡಿದ್ದರು. ಇದರಲ್ಲಿ ಇಬ್ಬರು ಮೃತಪಟ್ಟಿದ್ದು, ಮೂವರು ಪರಾರಿಯಾಗಿದ್ದಾರೆ. ಈ ಸಂಬಂಧ ಮುರ್ಮು ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ’ ಎಂದು ತಿಳಿಸಿದ್ದಾರೆ.