ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಸುರಿದ ಆಲಿಕಲ್ಲು ಮಳೆಗೆ 178 ಹೆಕ್ಟೇರ್ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ. 14 ಹೆಕ್ಟೇರ್ ಟೊಮೆಟೊ, 102 ಹೆಕ್ಟೇರ್ ಮಾವು, 0.4 ಹೆಕ್ಟೇರ್ ಗುಲಾಬಿ, 2 ಎಕರೆ ಮ್ಯಾರಿಗೋಲ್ಡ್ ಎರಡು ಹೆಕ್ಟೇರ್, ಸೇವಂತಿಗೆ 8.20 ಹೆಕ್ಟೇರ್, 8 ಹೆಕ್ಟೇರ್ ದ್ರಾಕ್ಷಿ ಹಾಗೂ ಇತರೆ ಬೆಳೆಗಳು 43 ಹೆಕ್ಟೇರ್ ಹಾನಿಯಾಗಿದೆ.