ಗೌರಿಬಿದನೂರು: ತಾಲ್ಲೂಕಿನ ಡಿ.ಪಾಳ್ಯ ಹೋಬಳಿಯ ಪುಲಮಾಕಲಹಳ್ಳಿಯಲ್ಲಿ ಶನಿವಾರ ರಾತ್ರಿ ಗುಡಿಸಲಿಗೆ ಬಿದ್ದ ಆಕಸ್ಮಿಕ ಬೆಂಕಿಯಲ್ಲಿ ಸುಮಾರು 60ಕ್ಕೂ ಹೆಚ್ಚು ಕುರಿ, 20 ಮೇಕೆ ಮತ್ತು ನಾಲಕ್ಉ ಜಾನುವಾರು ಸುಟ್ಟು ಕರಕಲಾಗಿವೆ.
ಗಂಗಾಧರಪ್ಪ ಎಂಬ ರೈತನ ಹುಲ್ಲಿನ ಗುಡಿಸಲಿಗ ಬೆಂಕಿ ತಗುಲಿ, ಗುಡಿಸಲಿನ ಒಳಗಿದ್ದ 60 ಕ್ಕೂ ಹೆಚ್ಚು ಕುರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.ಪಕ್ಕದ ಗುಡಿಸಲಿನಲ್ಲಿದ್ದ ಅಶ್ವತ್ಥಪ್ಪ ಅವರಿಗೆ ಸೇರಿದ 20 ಮೇಕೆ ಕೂಡ ಬೆಂಕಿಗಾಹುತಿಯಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.