ಗೌರಿಬಿದನೂರು: ‘ವಿಶ್ವದಲ್ಲಿಯೇ ಭಾರತದ ಸಂವಿಧಾನ ಶ್ರೇಷ್ಠವಾದುದು. ಅದರ ಆಶಯ ಈಡೇರಿಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ’ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ರೇಣುಕಾ ದೇವಿದಾಸ್ ರಾಯ್ಕರ್ ತಿಳಿಸಿದರು.
ನಗರದ ನ್ಯಾಯಾಲಯ ಆವರಣದಲ್ಲಿ ತಾಲ್ಲೂಕು ಸೇವಾ ಸಮಿತಿ ಹಾಗೂ ವಕೀಲರ ಸಂಘಯಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದರು.
ಆರ್. ರಾಮಚಂದ್ರ, ವಕೀಲರಾದ ಎಚ್.ಎಲ್. ವೆಂಕಟೇಶ, ಜೆ.ಕೆ. ಗಂಗಾಧರ್, ಕೆ. ಲಕ್ಷ್ಮೀನಾರಾಯಣ್ ವಿ.ಸಿ. ಗಂಗಯ್ಯ ಹಾಜರಿದ್ದರು.