<p><strong>ಗೌರಿಬಿದನೂರು</strong>: ತಾಲ್ಲೂಕಿನ ಅಲೀಪುರ ಗ್ರಾಮದಲ್ಲಿ ಈದ್ ಉಲ್ ಫಿತ್ರ್ ಹಬ್ಬದ ಸಾಮೂಹಿಕ ಪ್ರಾರ್ಥನೆ ವೇಳೆ ಅಮೆರಿಕ ಮತ್ತು ಇಸ್ರೇಲ್ ಧ್ವಜಗಳನ್ನು ಚಪ್ಪಲಿಯಿಂದ ತುಳಿಯಲಾಯಿತು.</p><p>ಇಲ್ಲಿನ ಶಿಯಾ ಮುಸ್ಲಿಮರು ಅಮೆರಿಕ ಮತ್ತು ಇಸ್ರೇಲ್ ಧ್ವಜಗಳನ್ನು ಚಪ್ಪಲಿಯಿಂದ ತುಳಿದು ಕಪ್ಪು ಪಟ್ಟಿ ಧರಿಸಿ ಆಕ್ರೋಶ ವ್ಯಕ್ತಪಡಿಸಿದರು.</p><p>ಅಲೀಪುರದ ಅಂಜುಮಾನ್ ಜಾಫ್ರಿಯಾ ಸಂಘದ ಅಧ್ಯಕ್ಷ ಮೀರ ಅಲಿ ಅಬ್ಬಾಸ್ ಮಾತನಾಡಿ, ‘ನಾವು ಪ್ರತಿ ವರ್ಷವೂ ರಂಜಾನ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದೆವು. ಜೈನಭಿಯಾ ಮಸೀದಿವರೆಗೆ ಮೆರವಣಿಗೆ ಬರುತ್ತಿದ್ದೆವು. ಆದರೆ ಈ ಬಾರಿ ನಮ್ಮ ಧಾರ್ಮಿಕ ಗುರು ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ಆಗಿದ್ದಾರೆ. ಅವರ ನಿಧನದ ಪ್ರಯುಕ್ತ ಮೆರವಣಿಗೆ ಅಥವಾ ಆಚರಣೆಗಳಿಲ್ಲದೆ ಕೇವಲ ಪ್ರಾರ್ಥನೆ ಮತ್ತು ನಮಾಜ್ಗೆ ಸೀಮಿತವಾಗಿ ಹಬ್ಬ ಆಚರಿಸಲಾಗುತ್ತಿದೆ ಎಂದು ಹೇಳಿದರು.</p><p>ಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಯಾದ ಸಂದರ್ಭದಲ್ಲಿಅಲೀಪುರದ ಶಿಯಾ ಮುಸ್ಲಿಮರು ಕಣ್ಣೀರು ಹಾಕಿದ್ದರು. ಪಟ್ಟಣದಲ್ಲಿ ಅಘೋಷಿತ ಬಂದ್ ಸ್ಥಿತಿ ಇತ್ತು. ಮೂರು ದಿನ ಶೋಕಾಚರಣೆ ಸಹ ನಡೆಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೌರಿಬಿದನೂರು</strong>: ತಾಲ್ಲೂಕಿನ ಅಲೀಪುರ ಗ್ರಾಮದಲ್ಲಿ ಈದ್ ಉಲ್ ಫಿತ್ರ್ ಹಬ್ಬದ ಸಾಮೂಹಿಕ ಪ್ರಾರ್ಥನೆ ವೇಳೆ ಅಮೆರಿಕ ಮತ್ತು ಇಸ್ರೇಲ್ ಧ್ವಜಗಳನ್ನು ಚಪ್ಪಲಿಯಿಂದ ತುಳಿಯಲಾಯಿತು.</p><p>ಇಲ್ಲಿನ ಶಿಯಾ ಮುಸ್ಲಿಮರು ಅಮೆರಿಕ ಮತ್ತು ಇಸ್ರೇಲ್ ಧ್ವಜಗಳನ್ನು ಚಪ್ಪಲಿಯಿಂದ ತುಳಿದು ಕಪ್ಪು ಪಟ್ಟಿ ಧರಿಸಿ ಆಕ್ರೋಶ ವ್ಯಕ್ತಪಡಿಸಿದರು.</p><p>ಅಲೀಪುರದ ಅಂಜುಮಾನ್ ಜಾಫ್ರಿಯಾ ಸಂಘದ ಅಧ್ಯಕ್ಷ ಮೀರ ಅಲಿ ಅಬ್ಬಾಸ್ ಮಾತನಾಡಿ, ‘ನಾವು ಪ್ರತಿ ವರ್ಷವೂ ರಂಜಾನ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದೆವು. ಜೈನಭಿಯಾ ಮಸೀದಿವರೆಗೆ ಮೆರವಣಿಗೆ ಬರುತ್ತಿದ್ದೆವು. ಆದರೆ ಈ ಬಾರಿ ನಮ್ಮ ಧಾರ್ಮಿಕ ಗುರು ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ಆಗಿದ್ದಾರೆ. ಅವರ ನಿಧನದ ಪ್ರಯುಕ್ತ ಮೆರವಣಿಗೆ ಅಥವಾ ಆಚರಣೆಗಳಿಲ್ಲದೆ ಕೇವಲ ಪ್ರಾರ್ಥನೆ ಮತ್ತು ನಮಾಜ್ಗೆ ಸೀಮಿತವಾಗಿ ಹಬ್ಬ ಆಚರಿಸಲಾಗುತ್ತಿದೆ ಎಂದು ಹೇಳಿದರು.</p><p>ಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಯಾದ ಸಂದರ್ಭದಲ್ಲಿಅಲೀಪುರದ ಶಿಯಾ ಮುಸ್ಲಿಮರು ಕಣ್ಣೀರು ಹಾಕಿದ್ದರು. ಪಟ್ಟಣದಲ್ಲಿ ಅಘೋಷಿತ ಬಂದ್ ಸ್ಥಿತಿ ಇತ್ತು. ಮೂರು ದಿನ ಶೋಕಾಚರಣೆ ಸಹ ನಡೆಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>