ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಅಪಘಾತ; ಒಬ್ಬ ವ್ಯಕ್ತಿ, 11 ಜಾನುವಾರು ಸಾವು

Last Updated 4 ಫೆಬ್ರುವರಿ 2018, 15:45 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಮಾರನಾಯಕನಪಾಳ್ಯದ ಸಮೀಪ ಭಾನುವಾರ ಜಾನುವಾರುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ವಾಹನದ ಮೇಲೆ  ಸಂಜೆ ವಿದ್ಯುತ್ ತಂತಿ ಬಿದ್ದು 11 ಜಾನುವಾರು ಸುಟ್ಟು ಕರಕಲಾಗಿವೆ ಹಾಗೂ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ.

ಕೊರಟಗೆರೆ ತಾಲ್ಲೂಕು ತಿಗಳರಪಾಳ್ಯದ ಗಂಗಣ್ಣ(38) ಮೃತಪಟ್ಟ ವ್ಯಕ್ತಿ. ಎರಡು ಜಾನುವಾರುಗಳು ತೀವ್ರವಾಗಿ ಗಾಯಗೊಂಡಿವೆ.

ತಿಗಳರಪಾಳ್ಯದಿಂದ ಸಿದ್ಧಗಂಗಾಮಠದ ಜಾತ್ರೆಯಲ್ಲಿ ನಡೆಯುವ ದನದ ಜಾತ್ರೆಗೆ ಜಾನುವಾರುಗಳನ್ನು ತರಲಾಗುತ್ತಿತ್ತು. ವಾಹನದ ಮೇಲೆ ಹುಲ್ಲು ಇರಿಸಲಾಗಿತ್ತು.ಈ ಹುಲ್ಲಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಅಪಘಾತ ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT