ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲ್ಲೂಕಿನ ದೇವಿಕುಂಟೆಯ ರೈತ ಗೋಪಾಲ್ ಅವರ ರಾಸುಗಳಿಗೆ ಚಿಕ್ಕಬಳ್ಳಾಪುರದ ಸಿಎಸ್ ಹಣ್ಣಿನ ಅಂಗಡಿಯ ಸಿ.ಮಲ್ಲಿಕಾರ್ಜುನ್ ಮತ್ತು ಭಾಸ್ಕರ್ ಹಣ್ಣುಗಳನ್ನು ಶನಿವಾರ ಕಳುಹಿಸಿಕೊಟ್ಟರು.
35ಕ್ಕೂ ಹೆಚ್ಚು ದೇಸಿ ಹಸುಗಳನ್ನು ಸಾಕುತ್ತಿರುವ ಗೋಪಾಲ್ ಅವರಿಗೆ ಮೇವಿನ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಇತ್ತೀಚೆಗೆ ‘ಪ್ರಜಾವಾಣಿ’ಯಲ್ಲಿ ವರದಿ ಸಹ ಪ್ರಕಟವಾಗಿತ್ತು. ಈ ಕಾರಣದಿಂದ ಜಿಲ್ಲೆಯ ವಿವಿಧ ಭಾಗಗಳ ರೈತರು, ವ್ಯಾಪಾರಿಗಳು ಹಣ್ಣ, ತರಕಾರಿಗಳನ್ನು ಕಳುಹಿಸುತ್ತಿದ್ದಾರೆ.
30 ಕ್ರೇಟ್ ಖರ್ಬೂಜ, ಬಾಳೆಹಣ್ಣು, ಟೊಮೆಟೊವನ್ನು ರಾಸುಗಳಿಗೆ ಮಲ್ಲಿಕಾರ್ಜುನ್ ಮತ್ತು ಭಾಸ್ಕರ್ ಕಳುಹಿಸಿದ್ದಾರೆ. ಮೇವು ನೀಡುವ ಭರವಸೆಯನ್ನೂ ನೀಡಿದ್ದಾರೆ. ಇದು ರೈತರಿಗೆ ಸಂತಸ ಮೂಡಿಸಿದೆ.