ಸಹಾಯಕ್ಕೆ ಬಾರದ ಕೃಷಿ ಇಲಾಖೆ: ಕೃಷಿ ಉತ್ತೇಜಿಸಲು ಪ್ರತಿ ತಾಲ್ಲೂಕಿನಲ್ಲಿ, ಹೋಬಳಿ ಕೇಂದ್ರಗಳಲ್ಲಿ ಕೃಷಿ ಇಲಾಖೆ ಕಚೇರಿ ಇದೆ. ಇಲಾಖೆಯ ಅಧಿಕಾರಿಗಳಿದ್ದಾರೆ. ಆದರೆ ಮುಂಗಾರು ಪ್ರಾರಂಭಗೊಳ್ಳುವ ಮುನ್ನವೇ ರೈತರ ಸಭೆ ಕರೆದು ಯಾವ ರೀತಿ ಕೃಷಿ ಚಟುವಟಿಕೆ ಮಾಡಬೇಕು, ಯಾವ ಭೂಮಿಗೆ ಯಾವ ಬೆಳೆ ಹಾಕಿದರೆ ಒಳಿತು, ತಮ್ಮ ಇಲಾಖೆಯಿಂದ ಏನೇನು ಸೌಲಭ್ಯಗಳಿವೆ, ಸವಲತ್ತುಗಳಿವೆ, ಯೋಜನೆಗಳ ಲಾಭವೇನು ಎಂಬುದರ ಬಗ್ಗೆ ತಾಲ್ಲೂಕಿನ ಕೃಷಿ ಇಲಾಖೆ ಅಧಿಕಾರಿಗಳು ಮಾಡುತ್ತಿಲ್ಲವೆಂಬುದು ರೈತರ ಆರೋಪವಾಗಿದೆ.