ಚಿಕ್ಕಬಳ್ಳಾಪುರ: ಇಲ್ಲಿನ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ನಂತರ ಪೊಲೀಸ್ ಇಲಾಖೆಯ 4, ಅರಣ್ಯ ಇಲಾಖೆ ಮತ್ತು ಗೃಹರಕ್ಷಕ ದಳದ ತಲಾ ಒಂದು ತಂಡ ಹಾಗೂ ಶಿಕ್ಷಣ ಇಲಾಖೆಯ 11 ತಂಡಗಳು ಕವಾಯತು ನಡೆಸಿದವು. ಸಚಿವರು ತಂಡಗಳ ಪರಿಚಯ ಮಾಡಿಕೊಂಡರು.