ಗ್ರಾಮದಲ್ಲಿ ಬಾಬಯ್ಯಸ್ವಾಮಿ ಹಾಗೂ ಪೀರುಗಳನ್ನು ಮೆರವಣಿಗೆ ಮಾಡಲಾಯಿತು. ಅಗ್ನಿಕುಂಡ ಪ್ರವೇಶ, ಡೊಳ್ಳು ಕುಣಿತ, ವೇಷಭೂಷಣಗಳ ನೃತ್ಯಗಳು ಅದ್ದೂರಿಯಾಗಿ ನಡೆಯಿತು. ಬೆಂಗಳೂರಿನ ರೂಪಕಲಾ ನೃತ್ಯ ಶಾಲೆಯ ಮುಖ್ಯಸ್ಥೆ ರೂಪಶ್ರೀ ಅರವಿಂದ್ ಅವರ ನೇತೃತ್ವದಲ್ಲಿ ಕಲಾತಂಡದವರು ವಿವಿಧತೆಯಲ್ಲಿ ಏಕತೆ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಶಿವನ ರುದ್ರ ತಾಂಡವ, ಹಚ್ಚೇವು ಕನ್ನಡದ ದೀಪ ಹಾಡುಗಳಿಗೆ ಭರತನಾಟ್ಯ ಪ್ರದರ್ಶಿಸಿದರು. ತಮಟೆ ಸದ್ದಿಗೆ ಎಲ್ಲರೂ ಹೆಜ್ಜೆ ಹಾಕಿ ಸಂಭ್ರಮಿಸಿದರು.