ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿಯಲ್ಲಿ ಮಂಗಳವಾರ ನೂತನ ಮಂಚೇನಹಳ್ಳಿ ತಾಲ್ಲೂಕು ರಚನೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಹೊಸ ತಾಲ್ಲೂಕಿಗೆ ನನ್ನ ಕ್ಷೇತ್ರದ ತೊಂಡೇಬಾವಿ, ನಾಮಗೊಂಡ್ಲು, ಬಿ.ಬೊಮ್ಮಸಂದ್ರ ಹಾಗೂ ಡಿ.ಪಾಳ್ಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಗ್ರಾಮಗಳನ್ನು ಸೇರಿಸದಂತೆ ಕಂದಾಯ ಸಚಿವರಿಗೆ ಆಕ್ಷೇಪಣೆ ಸಲ್ಲಿಸಿದ್ದೆ. ಆದರೆ ಅನರ್ಹ ಶಾಸಕ ಸುಧಾಕರ್ ಅವರನ್ನು ಓಲೈಸಲು ಸರ್ಕಾರ ನಮ್ಮ ಆಕ್ಷೇಪಣೆಗೆ ಬೆಲೆ ನೀಡದೆ ತಾಲ್ಲೂಕು ರಚನೆ ಮಾಡಿದೆ’ ಎಂದು ಆರೋಪಿಸಿದರು.