ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್ ವ್ಯವಸ್ಥೆ ಮಾಡಲು ಕೆಎಸ್ಆರ್ಟಿಸಿ ಅಧಿಕಾರಿಗಳು ನಿರ್ಧರಿಸಿ, ಜಿಲ್ಲೆಯಲ್ಲಿ 70 ರಿಂದ 100 ಬಸ್ ಓಡಿಸಲು ವ್ಯವಸ್ಥೆ ಮಾಡಿಕೊಂಡಿದ್ದರು. ಆದರೆ, ಮಂಗಳವಾರ ಚಿಕ್ಕಬಳ್ಳಾಪುರ 20, ಚಿಂತಾಮಣಿ 12, ಶಿಡ್ಲಘಟ್ಟ 13, ಬಾಗೇಪಲ್ಲಿ 9, ಗೌರಿಬಿದನೂರು 17 ಬಸ್ಗಳು ಸೇರಿದಂತೆ ದಿನವಿಡೀ 71 ಬಸ್ಗಳು ಸಂಚರಿಸಿದವು. ಈ ಪೈಕಿ 47 ಬಸ್ಗಳು ಬೆಂಗಳೂರಿಗೆ ಸಂಚರಿಸಿದವು.