ಮತ್ತೊಬ್ಬ ವೆಂಕಟರವಣಪ್ಪ ಕುಟುಂಬದಲ್ಲಿ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ಮೊದಲಿನಿಂದಲೂ ಮನೆ ಇಲ್ಲ. ಬುಡಬುಡಿಕೆ ವೇಷ ಹಾಕಿ ಮನೆ ಮನೆಗೂ ಭೇಟಿ ನೀಡಿ ಅಕ್ಕಿ, ಬೇಳೆ ತಂದು ಕುಟುಂಬ ಪೋಷಿಸುತ್ತಿದ್ದಾರೆ. ಹಾಗೂ ಚೇಳೂರು ತಾಲ್ಲೂಕಿನ ಗೆರಿಗಿರೆಡ್ಡಿಪಾಳ್ಯದ ಆದಿನಾರಾಯಣ ಕುಟುಂಬದಲ್ಲಿ ಪತ್ನಿ, ಚಿಕ್ಕಮಕ್ಕಳು ಗುಡಿಸಲು ಕಟ್ಟಿಕೊಂಡು ಸ್ಟೌವ್, ಗ್ಯಾಸ್ ರಿಪೇರಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಕಲ್ಲರೋಳ್ಳಪಲ್ಲಿ ಗ್ರಾಮದ ವೃದ್ಧ ಆಂಜಿನಪ್ಪ ಅವರ ಮನೆಯು ಸುಟ್ಟಿದ್ದರಿಂದ ಮೊಮ್ಮಗನ ಜತೆಯಲ್ಲಿ ಇದ್ದಾರೆ.