ಕಾಕರಾಮನಹಳ್ಳಿ ನಿವಾಸಿಗಳಾದ ರಾಜಣ್ಣ (55) ಹಾಗೂ ಕುಮಾರ್ (26) ಮೃತರು.ಈ ಇಬ್ಬರು ಕೆರೆಯ ದಡದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದರು. ಬಿಸಿಲಿನ ಕಾರಣಕ್ಕೆ ಅವುಗಳನ್ನು ತೊಳೆಯಲು ನೀರಿಗೆ ಇಳಿದಿದ್ದರು. ಕೆರೆಯಲ್ಲಿ ಅಕ್ರಮ ಮರಳುಗಾರಿಕೆಯಿಂದಾಗಿ ಗುಂಡಿಗಳು ಉಂಟಾಗಿದ್ದು, ಈಜು ಬಾರದೇ ಈ ಇಬ್ಬರು ಸಾವನ್ನಪ್ಪಿದರು ಎಂದು ಸ್ಥಳೀಯರು ತಿಳಿಸಿದರು.