‘ಮಾರ್ಚ್ 31ರಂದು 3,500 ನಾರುಗಳನ್ನು ಹತ್ತು ಗುಂಟೆಯ ಪಾಲಿಹೌಸ್ನಲ್ಲಿ ನಾಟಿ ಮಾಡಿದ್ದೆವು. ರೋಗಬಂದು ಸುಮಾರು ಆರು ನೂರು ಗಿಡ ಹಾಳಾದವು. ಉಳಿದದ್ದು ಕೂಡ ಹಾಳಾಗುವ ಸ್ಥಿತಿಯಲ್ಲಿತ್ತು. ಆ ಸಮಯದಲ್ಲಿ ಗ್ರೀನ್ ಪ್ಲಾನೆಟ್ ಜೈವಿಕ ಪೋಷಕಾಂಶ ಕೊಟ್ಟು ಗಿಡಗಳನ್ನು ಕಾಪಾಡಿದೆ. ಸಾವಯವ ಗೊಬ್ಬರ ಹಾಗೂ ಕ್ರಿಮಿನಾಶಕ ಬಳಸದೇ ಜೈವಿಕ ಅಂಶಗಳಿಂದ ಬೆಳೆದ ಕ್ಯಾಪ್ಸಿಕಂ ಬೇಗ ಕೆಡುವುದಿಲ್ಲ. ಹಾಗಾಗಿ ಹೊರ ರಾಜ್ಯ, ದೇಶಗಳಿಗೆ ರಫ್ತಾಗುತ್ತದೆ. ಕೆಂಪು ಮತ್ತು ಹಳದಿ ಬಣ್ಣದ ಕ್ಯಾಪ್ಸಿಕಂ ಕೆ.ಜಿಗೆ ₹ 100 ಇದೆ. ಹಸಿರುಬಣ್ಣದ ಕ್ಯಾಪ್ಸಿಕಂಗೆ ₹ 70 ಇದೆ’ ಎಂದು ಆನೂರು ದೇವರಾಜು ವಿವರಿಸಿದರು.