ಈ ವಿಷಯ ತಿಳಿಯುತ್ತಿದ್ದಂತೆ ನಿವೃತ್ತ ಶಿಕ್ಷಕ ಹನುಮಂತಪ್ಪ, ‘ಪ್ರಜಾವಾಣಿ’ ಛಾಯಾಗ್ರಾಹಕ ಬಿ.ಆರ್.ಮಂಜುನಾಥ, ಗ್ರಾಮಸ್ಥರಾದ ಸರಸ್ವತಮ್ಮ ನಾರಾಯಣಮ್ಮ ಅವರು ಕೃಷಿಹೊಂಡದತ್ತ ಧಾವಿಸಿದರು. ಈ ವೇಳೆ ಹನುಮಂತಪ್ಪ ಮತ್ತು ಮಂಜುನಾಥ್ ಅವರು ಹೊಂಡಕ್ಕೆ ಇಳಿದು ಜಿಂಕೆಯನ್ನು ರಕ್ಷಿಸಿ, ಆರೈಕೆ ಮಾಡಿ, ವಿಷಯವನ್ನು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು.