<p>ಚಿಕ್ಕಬಳ್ಳಾಪುರ: ‘ನಮಗೆ ಕೈಗಾರಿಕೆಯೂ ಬೇಕು, ಕೃಷಿಯೂ ಬೇಕು. ನಮ್ಮ ಜಮೀನುಗಳನ್ನು ನಾವು ಕೈಗಾರಿಕೆಗೆ ನೀಡಲು ಸಿದ್ಧ. ಈ ವಿಚಾರದಲ್ಲಿ ಯಾವುದೇ ರಾಜಕಾರಣ ಬೆಸೆಯುವುದು ಬೇಡ’ ಎಂದು ಜಂಗಮಕೋಟೆ ಹೋಬಳಿ ಕೆಐಎಡಿಬಿ ರೈತ ಪರ ಹೋರಾಟ ಸಮಿತಿ ಸದಸ್ಯರು ತಿಳಿಸಿದರು.</p>.<p>ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯ ಸುಬ್ರಹ್ಮಣ್ಯ, ‘ನಾವು ಕೆಐಎಡಿಬಿಗೆ ಜಮೀನು ನೀಡುತ್ತೇವೆ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆಯೇ ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆಗಳಿಗೆ ಪ್ರಯತ್ನಗಳು ನಡೆದಿದ್ದವು ಎಂದರು.</p>.<p>ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆಗಳ ಸ್ಥಾಪನೆ ವಿಚಾರವಾಗಿ ಸಂಸದ ಡಾ.ಕೆ.ಸುಧಾಕರ್ ಅವರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ವಿರುದ್ಧ ಮಾತನಾಡಿರುವುದು ಸೂಕ್ತವಲ್ಲ. ನಮ್ಮ ಜಮೀನು ಉಳಿಸಿಕೊಡಿ ಎಂದು ನಾನು ಅವರ ಮನೆ ಬಾಗಿಲುಗಳಿಗೆ ಹೋಗಿಲ್ಲ ಎಂದು ಹೇಳಿದರು.</p>.<p>ನೀರಾವರಿ ಪ್ರದೇಶ ಉಳಿಸಿಕೊಡಿ ಎಂದು ಸಚಿವರಿಗೆ, ಶಾಸಕರಿಗೆ ಮನವಿ ಮಾಡಿದ್ದೆವು. ಆ ಪ್ರಕಾರ 500 ಎಕರೆ ನೀರಾವರಿ ಜಮೀನನನ್ನು ಉಳಿಸಿಕೊಟ್ಟಿದ್ದಾರೆ. ನಾವು ಯಾರೂ ಭೂ ಮಾಫಿಯಾದವರ ಪರವಾಗಿಲ್ಲ. ಕೆಐಎಡಿಬಿಯು ನಿಗದಿ ಮಾಡಿರುವ ಭೂ ಪರಿಹಾರದ ದರವು ನಮಗೆ ತೃಪ್ತಿ ನೀಡಿಲ್ಲ. ದರ ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದರು.</p>.<p>ಜಿಲ್ಲಾಧಿಕಾರಿ ಅವರು ರೈತರ ಕಷ್ಟ ಕೇಳಬೇಕು. ಬೆಳ್ಳೂಟ್ಟಿ ಕೆರೆಗೆ ಎಚ್.ಎನ್.ವ್ಯಾಲಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು.</p>.<p>ಪ್ರತೀಶ್ ಮಾತನಾಡಿ, ಸಂಸದರು ತಮ್ಮ ಪ್ರಯತ್ನದ ಮೂಲಕ ಇನ್ನೂ 100 ಎಕರೆ ಜಮೀನು ಕೈ ಬಿಡಿಸಲಿ. ಆದರೆ ದ್ವಂದ್ವದ ನಿಲುವು ಬೇಡ. ಶಿಡ್ಲಘಟ್ಟದ ಮಾಜಿ ಶಾಸಕ ರಾಜಣ್ಣ ಅವರು ಡಾ.ಕೆ.ಸುಧಾಕರ್ ಅವರ ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.</p>.<p>ಪ್ರಭುಗೌಡ, ನಾಗರಾಜ್ ಮತ್ತಿತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260414-16-1640275668</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಬಳ್ಳಾಪುರ: ‘ನಮಗೆ ಕೈಗಾರಿಕೆಯೂ ಬೇಕು, ಕೃಷಿಯೂ ಬೇಕು. ನಮ್ಮ ಜಮೀನುಗಳನ್ನು ನಾವು ಕೈಗಾರಿಕೆಗೆ ನೀಡಲು ಸಿದ್ಧ. ಈ ವಿಚಾರದಲ್ಲಿ ಯಾವುದೇ ರಾಜಕಾರಣ ಬೆಸೆಯುವುದು ಬೇಡ’ ಎಂದು ಜಂಗಮಕೋಟೆ ಹೋಬಳಿ ಕೆಐಎಡಿಬಿ ರೈತ ಪರ ಹೋರಾಟ ಸಮಿತಿ ಸದಸ್ಯರು ತಿಳಿಸಿದರು.</p>.<p>ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯ ಸುಬ್ರಹ್ಮಣ್ಯ, ‘ನಾವು ಕೆಐಎಡಿಬಿಗೆ ಜಮೀನು ನೀಡುತ್ತೇವೆ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆಯೇ ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆಗಳಿಗೆ ಪ್ರಯತ್ನಗಳು ನಡೆದಿದ್ದವು ಎಂದರು.</p>.<p>ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆಗಳ ಸ್ಥಾಪನೆ ವಿಚಾರವಾಗಿ ಸಂಸದ ಡಾ.ಕೆ.ಸುಧಾಕರ್ ಅವರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ವಿರುದ್ಧ ಮಾತನಾಡಿರುವುದು ಸೂಕ್ತವಲ್ಲ. ನಮ್ಮ ಜಮೀನು ಉಳಿಸಿಕೊಡಿ ಎಂದು ನಾನು ಅವರ ಮನೆ ಬಾಗಿಲುಗಳಿಗೆ ಹೋಗಿಲ್ಲ ಎಂದು ಹೇಳಿದರು.</p>.<p>ನೀರಾವರಿ ಪ್ರದೇಶ ಉಳಿಸಿಕೊಡಿ ಎಂದು ಸಚಿವರಿಗೆ, ಶಾಸಕರಿಗೆ ಮನವಿ ಮಾಡಿದ್ದೆವು. ಆ ಪ್ರಕಾರ 500 ಎಕರೆ ನೀರಾವರಿ ಜಮೀನನನ್ನು ಉಳಿಸಿಕೊಟ್ಟಿದ್ದಾರೆ. ನಾವು ಯಾರೂ ಭೂ ಮಾಫಿಯಾದವರ ಪರವಾಗಿಲ್ಲ. ಕೆಐಎಡಿಬಿಯು ನಿಗದಿ ಮಾಡಿರುವ ಭೂ ಪರಿಹಾರದ ದರವು ನಮಗೆ ತೃಪ್ತಿ ನೀಡಿಲ್ಲ. ದರ ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದರು.</p>.<p>ಜಿಲ್ಲಾಧಿಕಾರಿ ಅವರು ರೈತರ ಕಷ್ಟ ಕೇಳಬೇಕು. ಬೆಳ್ಳೂಟ್ಟಿ ಕೆರೆಗೆ ಎಚ್.ಎನ್.ವ್ಯಾಲಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು.</p>.<p>ಪ್ರತೀಶ್ ಮಾತನಾಡಿ, ಸಂಸದರು ತಮ್ಮ ಪ್ರಯತ್ನದ ಮೂಲಕ ಇನ್ನೂ 100 ಎಕರೆ ಜಮೀನು ಕೈ ಬಿಡಿಸಲಿ. ಆದರೆ ದ್ವಂದ್ವದ ನಿಲುವು ಬೇಡ. ಶಿಡ್ಲಘಟ್ಟದ ಮಾಜಿ ಶಾಸಕ ರಾಜಣ್ಣ ಅವರು ಡಾ.ಕೆ.ಸುಧಾಕರ್ ಅವರ ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.</p>.<p>ಪ್ರಭುಗೌಡ, ನಾಗರಾಜ್ ಮತ್ತಿತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260414-16-1640275668</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>