<p>ಚಿಕ್ಕಬಳ್ಳಾಪುರ: ಯಾವುದೇ ನೋಟಿಸ್ ಇಲ್ಲದೆ ಬಡ್ಡಿ ಹೆಚ್ಚಿಸಿದ ಹಿನ್ನೆಲೆಯಲ್ಲಿ ಚೋಳಮಂಡಲಂ ಫೈನಾನ್ಸ್ ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ₹ 20 ಸಾವಿರ ದಂಡ ವಿಧಿಸಿದೆ.</p>.<p>ಚೊಕ್ಕಹಳ್ಳಿ ಗ್ರಾಮದ ಮೋಹನ್ ಕುಮಾರ್ ಎಂ.ಜಿ ಹಾಗೂ ಪದ್ಮಾವತಿ ಸಂಸ್ಥೆಯಿಂದ ಶೇ 12.5ರ ಬಡ್ಡಿ ದರದಲ್ಲಿ ಗೃಹ ಸಾಲ ಪಡೆದಿದ್ದರು. ಆದರೆ ನೋಟಿಸ್ ನೀಡದೆ ಬಡ್ಡಿಯನ್ನು ಶೇ 14.5ಕ್ಕೆ ಹೆಚ್ಚಿಸಲಾಗಿತ್ತು. ಈ ಸಂಬಂಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಅವರು ದೂರು ದಾಖಲಿಸಿದ್ದರು.</p>.<p>ಆಯೋಗದ ಅಧ್ಯಕ್ಷ ಕುಮಾರ್ ಎನ್. ಮತ್ತು ಸದಸ್ಯ ಎಚ್.ಜನಾರ್ದನ್ ವಿಚಾರಣೆ ನಡೆಸಿದ್ದರು. ಹಣಕಾಸು ಸಂಸ್ಥೆಯು ಸೇವಾ ನ್ಯೂನ್ಯತೆ ಎಸಗಿರುವುದನ್ನು ಗಮನಿಸಿ ದೂರುದಾರರಿಗೆ ₹ 20,000 ಪರಿಹಾರದ ಹಣ ಮತ್ತು ದಾವೆ ವೆಚ್ಚ ₹ 10 ನೀಡಬೇಕು. ಬಡ್ಡಿಯನ್ನು ಶೇ 14.50 ರಿಂದ ಶೇ 12.50 ಕ್ಕೆ ಪುನರ್ ರಚಿಸಬೇಕು ಎಂದು ಆದೇಶಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260326-16-1850457729</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಬಳ್ಳಾಪುರ: ಯಾವುದೇ ನೋಟಿಸ್ ಇಲ್ಲದೆ ಬಡ್ಡಿ ಹೆಚ್ಚಿಸಿದ ಹಿನ್ನೆಲೆಯಲ್ಲಿ ಚೋಳಮಂಡಲಂ ಫೈನಾನ್ಸ್ ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ₹ 20 ಸಾವಿರ ದಂಡ ವಿಧಿಸಿದೆ.</p>.<p>ಚೊಕ್ಕಹಳ್ಳಿ ಗ್ರಾಮದ ಮೋಹನ್ ಕುಮಾರ್ ಎಂ.ಜಿ ಹಾಗೂ ಪದ್ಮಾವತಿ ಸಂಸ್ಥೆಯಿಂದ ಶೇ 12.5ರ ಬಡ್ಡಿ ದರದಲ್ಲಿ ಗೃಹ ಸಾಲ ಪಡೆದಿದ್ದರು. ಆದರೆ ನೋಟಿಸ್ ನೀಡದೆ ಬಡ್ಡಿಯನ್ನು ಶೇ 14.5ಕ್ಕೆ ಹೆಚ್ಚಿಸಲಾಗಿತ್ತು. ಈ ಸಂಬಂಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಅವರು ದೂರು ದಾಖಲಿಸಿದ್ದರು.</p>.<p>ಆಯೋಗದ ಅಧ್ಯಕ್ಷ ಕುಮಾರ್ ಎನ್. ಮತ್ತು ಸದಸ್ಯ ಎಚ್.ಜನಾರ್ದನ್ ವಿಚಾರಣೆ ನಡೆಸಿದ್ದರು. ಹಣಕಾಸು ಸಂಸ್ಥೆಯು ಸೇವಾ ನ್ಯೂನ್ಯತೆ ಎಸಗಿರುವುದನ್ನು ಗಮನಿಸಿ ದೂರುದಾರರಿಗೆ ₹ 20,000 ಪರಿಹಾರದ ಹಣ ಮತ್ತು ದಾವೆ ವೆಚ್ಚ ₹ 10 ನೀಡಬೇಕು. ಬಡ್ಡಿಯನ್ನು ಶೇ 14.50 ರಿಂದ ಶೇ 12.50 ಕ್ಕೆ ಪುನರ್ ರಚಿಸಬೇಕು ಎಂದು ಆದೇಶಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260326-16-1850457729</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>