<p><strong>ಚಿಕ್ಕಬಳ್ಳಾಪುರ</strong>: ಜಿಲ್ಲೆಯ ಕೆರೆಗಳಿಗೆ ಹರಿಸುವ ಎಚ್.ಎನ್ ವ್ಯಾಲಿ ನೀರು ಸಂಗ್ರಹವಾಗುವ ನಗರದ ಕಂದವಾರ ಕೆರೆ ಕಲುಷಿತ ನೀರಿನ ಕಾರಣಕ್ಕೆ ಚರ್ಚೆಗೆ ಒಳಗಾಗಿದೆ. ಆದರೆ ಕಂದವಾರ ಕೆರೆ ಸುತ್ತಲೂ ಘನ ತ್ಯಾಜ್ಯ ಕೆರೆಯನ್ನು ಇನ್ನಷ್ಟು ಮಲಿನಗೊಳಿಸಲಾಗುತ್ತಿದೆ.</p>.<p>ನಗರದ ಮೈಲಪ್ಪನಹಳ್ಳಿ, ಕಳವಾರಕ್ಕೆ ತೆರಳುವ ರಸ್ತೆಯಲ್ಲಿ ಕಂದವಾರ ಕೆರೆ ಸುತ್ತ ನಗರದ ಜನರು ಬಳಸಿರುವ ಪ್ಲಾಸ್ಟಿಕ್, ಅನುಪಯುಕ್ತ ತ್ಯಾಜ್ಯವನ್ನು ಕೆರೆ ಅಂಗಳಕ್ಕೆ ಸುರಿಯಲಾಗುತ್ತಿದೆ. ಈ ಮೂಲಕ ಕೆರೆಯ ಪರಿಸರವನ್ನು ಹಾಳು ಮಾಡಲಾಗುತ್ತಿದೆ.</p>.<p>ಒಮ್ಮೆ ಕಂದವಾರ ಕೆರೆ ಸುತ್ತಲೂ ಕಣ್ಣಾಯಿಸಿದರೆ ಸಾಕು ತೆರವುಗೊಂಡ ಮನೆಗಳ ತ್ಯಾಜ್ಯದ ರಾಶಿ ಕಾಣುತ್ತದೆ. ಬಳಸಿ ಬಿಸಾಡಿರುವ ಹೇರಳ ಪ್ರಮಾಣದ ಪ್ಲಾಸ್ಟಿಕ್ ವಸ್ತುಗಳು ಕೆರೆಯ ಒಡಲು ಸೇರುತ್ತಿವೆ.</p>.<p>ಕಂದವಾರ ಕೆರೆಯು ಎಚ್.ಎನ್ ವ್ಯಾಲಿ ನೀರು ಬಂದ ಬಳಿಕ ಅದರ ಸಂಪೂರ್ಣ ಚಿತ್ರಣ ಬದಲಾಗಿದೆ. ಕೆರೆಯಲ್ಲಿ ಜುಂಡು ಬೆಳೆದು ಕೆರೆಯು ಕಾಣದಂತೆ ಆಗಿದೆ. ಈ ನಡುವೆ ನಗರದ ವಿವಿಧ ಬಡಾವಣೆಗಳ ನಿವಾಸಿಗಳು ತಮ್ಮ ಮನೆಗಳಲ್ಲಿ ಸಂಗ್ರಹವಾಗುವ ಹಸಿ, ಒಣ ಕಸವನ್ನು ನಗರಸಭೆಯ ವಾಹನಗಳಿಗೆ ಕೊಡದೆ ನೇರವಾಗಿ ಕಂದವಾರ ಕೆರೆಯ ಅಕ್ಕಪಕ್ಕ ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ.</p>.<p>ಹಳೇ ಕಟ್ಟಡಗಳ ಘನ ತ್ಯಾಜ್ಯ ಕೂಡ ಕೆರೆ ಅಂಗಳದಲ್ಲಿ ಬೆಟ್ಟದ ಸಾಲಿನಂತೆ ಶೇಖರಣೆ ಆಗುತ್ತಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260518-16-60592346</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ</strong>: ಜಿಲ್ಲೆಯ ಕೆರೆಗಳಿಗೆ ಹರಿಸುವ ಎಚ್.ಎನ್ ವ್ಯಾಲಿ ನೀರು ಸಂಗ್ರಹವಾಗುವ ನಗರದ ಕಂದವಾರ ಕೆರೆ ಕಲುಷಿತ ನೀರಿನ ಕಾರಣಕ್ಕೆ ಚರ್ಚೆಗೆ ಒಳಗಾಗಿದೆ. ಆದರೆ ಕಂದವಾರ ಕೆರೆ ಸುತ್ತಲೂ ಘನ ತ್ಯಾಜ್ಯ ಕೆರೆಯನ್ನು ಇನ್ನಷ್ಟು ಮಲಿನಗೊಳಿಸಲಾಗುತ್ತಿದೆ.</p>.<p>ನಗರದ ಮೈಲಪ್ಪನಹಳ್ಳಿ, ಕಳವಾರಕ್ಕೆ ತೆರಳುವ ರಸ್ತೆಯಲ್ಲಿ ಕಂದವಾರ ಕೆರೆ ಸುತ್ತ ನಗರದ ಜನರು ಬಳಸಿರುವ ಪ್ಲಾಸ್ಟಿಕ್, ಅನುಪಯುಕ್ತ ತ್ಯಾಜ್ಯವನ್ನು ಕೆರೆ ಅಂಗಳಕ್ಕೆ ಸುರಿಯಲಾಗುತ್ತಿದೆ. ಈ ಮೂಲಕ ಕೆರೆಯ ಪರಿಸರವನ್ನು ಹಾಳು ಮಾಡಲಾಗುತ್ತಿದೆ.</p>.<p>ಒಮ್ಮೆ ಕಂದವಾರ ಕೆರೆ ಸುತ್ತಲೂ ಕಣ್ಣಾಯಿಸಿದರೆ ಸಾಕು ತೆರವುಗೊಂಡ ಮನೆಗಳ ತ್ಯಾಜ್ಯದ ರಾಶಿ ಕಾಣುತ್ತದೆ. ಬಳಸಿ ಬಿಸಾಡಿರುವ ಹೇರಳ ಪ್ರಮಾಣದ ಪ್ಲಾಸ್ಟಿಕ್ ವಸ್ತುಗಳು ಕೆರೆಯ ಒಡಲು ಸೇರುತ್ತಿವೆ.</p>.<p>ಕಂದವಾರ ಕೆರೆಯು ಎಚ್.ಎನ್ ವ್ಯಾಲಿ ನೀರು ಬಂದ ಬಳಿಕ ಅದರ ಸಂಪೂರ್ಣ ಚಿತ್ರಣ ಬದಲಾಗಿದೆ. ಕೆರೆಯಲ್ಲಿ ಜುಂಡು ಬೆಳೆದು ಕೆರೆಯು ಕಾಣದಂತೆ ಆಗಿದೆ. ಈ ನಡುವೆ ನಗರದ ವಿವಿಧ ಬಡಾವಣೆಗಳ ನಿವಾಸಿಗಳು ತಮ್ಮ ಮನೆಗಳಲ್ಲಿ ಸಂಗ್ರಹವಾಗುವ ಹಸಿ, ಒಣ ಕಸವನ್ನು ನಗರಸಭೆಯ ವಾಹನಗಳಿಗೆ ಕೊಡದೆ ನೇರವಾಗಿ ಕಂದವಾರ ಕೆರೆಯ ಅಕ್ಕಪಕ್ಕ ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ.</p>.<p>ಹಳೇ ಕಟ್ಟಡಗಳ ಘನ ತ್ಯಾಜ್ಯ ಕೂಡ ಕೆರೆ ಅಂಗಳದಲ್ಲಿ ಬೆಟ್ಟದ ಸಾಲಿನಂತೆ ಶೇಖರಣೆ ಆಗುತ್ತಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260518-16-60592346</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>