<p>ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರವೂ ಒಂದಾಗಿದೆ. ಬಯಲು ಸೀಮೆಯ ಈ ಜಿಲ್ಲೆಯಲ್ಲಿ ಕೆರೆಗಳಷ್ಟೇ ಹೆಚ್ಚಿವೆ. ಆದರೆ ಈ ಕೆರೆಗಳಲ್ಲಿ ನೀರು ಯಾವ ಪ್ರಮಾಣದಲ್ಲಿದೆ ಎಂದು ಗಮನಿಸಿದರೆ ನಿರಾಸೆ ಎದ್ದು ಕಾಣುತ್ತದೆ.</p>.<p>ಕೆರೆಗಳಲ್ಲಿ ನೀರಿಲ್ಲ. ಇದ್ದರೂ ಅಲ್ಪಸ್ವಲ್ಪವಷ್ಟೇ! ಬಹುತೇಕ ಕೆರೆಗಳು ನೀರಿಲ್ಲದೆ ಒಣಗುತ್ತಿದ್ದರೆ ಕೆಲವು ಕೆರೆಗಳಲ್ಲಿ ಅಲ್ಪಸ್ವಲ್ಪ ನೀರಿದೆ. ವಿಶೇಷವಾಗಿ ಬೇಸಿಗೆಯ ಈ ದಿನಗಳಲ್ಲಿ ಕೆರೆಗಳಲ್ಲಿ ನೀರು ಇದ್ದರೆ ಅನುಕೂಲವಾಗುತ್ತಿತ್ತು.</p>.<p>ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 203 ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 1,332 ಕೆರೆಗಳಿವೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಒಂದಿಷ್ಟು ಕೆರೆಗಳನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ಕೆರೆಗಳಲ್ಲಿ ನೀರು ವರ್ಷವಿಡೀ ಇರಬೇಕು. ಎಚ್.ಎನ್.ವ್ಯಾಲಿಯ ನೀರನ್ನು ಕೆಲವು ಕೆರೆಗಳಿಗೆ ಹರಿಸಲಾಗುತ್ತಿದೆ. ವ್ಯಾಲಿ ನೀರಿನ ಕಾರಣ ಆ ಕೆರೆಗಳಲ್ಲಿ ವರ್ಷ ಪೂರ್ಣ ನೀರು ಇರುತ್ತದೆ. ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕೆರೆಗಳಲ್ಲಿ ಪ್ರವಾಸೋದ್ಯಮ ಇಲಾಖೆಯು ಬೋಟಿಂಗ್ ನಡೆಸಲು ಅವಕಾಶ ಸಹ ನೀಡಿದೆ. ಹೀಗೆ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳಲ್ಲಿ ಸದ್ಯ ಶೇ 33.30ರಷ್ಟು ನೀರಿದೆ.</p>.<p>ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 1,332 ಕೆರೆಗಳು ಜಿಲ್ಲೆಯಲ್ಲಿವೆ. ಈ ಕೆರೆಗಳಲ್ಲಿ ಸದ್ಯ ಶೇ 15.33ರಷ್ಟು ಮಾತ್ರ ನೀರಿದೆ. ಬಹುತೇಕ ಜಿ.ಪಂ ಕೆರೆಗಳು ಬರಡಾಗಿವೆ. ಕೆಲವು ಕಡೆಗಳಲ್ಲಿ ನೀರಿದ್ದರೂ ಅದು ಅಲ್ಪ ಪ್ರಮಾಣ.</p>.<p>ನೀರಾವರಿ ವಿಚಾರವಾಗಿ ಮೂರು ದಶಕಗಳಿಂದಲೂ ಜಿಲ್ಲೆಯಲ್ಲಿ ಹೋರಾಟಗಳು ನಡೆಯುತ್ತಿವೆ. ಕೆರೆಗಳಿಗೆ ನೀರು ಹರಿಯುವ ರಾಜಕಾಲುವೆಗಳು, ಕಾಲುವೆಗಳನ್ನು ಪುನಶ್ಚೇತನಗೊಳಿಸಬೇಕು. ಆ ಮೂಲಕ ಕೆರೆಗಳನ್ನು ಪುನರುಜ್ಜೀವನಗೊಳಿಸಬೇಕು. ಇದರಿಂದ ಕೆರೆಗಳಲ್ಲಿ ನೀರಿನ ಸಂಗ್ರಹ ಹೆಚ್ಚುತ್ತದೆ ಎಂದು ನೀರಾವರಿ ಹೋರಾಟಗಾರರು ಪ್ರತಿಪಾದಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಇಂದಿಗೂ ರಾಜಕಾಲುವೆಗಳ ಒತ್ತುವರಿ ತೆರವು ಸೇರಿದಂತೆ ಕೆರೆಗಳ ಅಭಿವೃದ್ಧಿಗೆ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಗಳು ಆಗಿಲ್ಲ.</p>.<p>ಒಂದು ಕೆರೆ ತುಂಬಿ ಕೋಡಿ ಹರಿದರೆ ಆ ನೀರು ಮತ್ತೊಂದು ಕೆರೆಯತ್ತ ಮುಖ ಮಾಡುತ್ತದೆ. ಹೀಗೆ ಒಂದೊಂದು ಕೆರೆಗೂ ನೀರು ಹರಿವಿನ ವಿಚಾರವಾಗಿ ಪರಸ್ಪರ ಸಂಬಂಧವಿದೆ. ಆದರೆ ಈ ಪರಸ್ಪರ ಸಂಬಂಧದ ಕೊಂಡಿಗಳು ಕಡಿದಿವೆ. ಪರಿಣಾಮ ಮಳೆ ಬಿದ್ದರೂ ಕೆರೆಗಳು ತುಂಬುತ್ತಿಲ್ಲ.</p>.<p>ಹೂಳು ಸಹ ದೊಡ್ಡ ಪ್ರಮಾಣದಲ್ಲಿರುವುದು ಕೆರೆಗಳಲ್ಲಿನ ನೀರು ಬೇಗ ಖಾಲಿಯಾಗಲು ಪ್ರಮುಖ ಕಾರಣವಾಗಿದೆ. ಮಳೆ ಕೊರತೆ, ಹೂಳು, ಒತ್ತುವರಿ, ರಾಜಕಾಲವೆಗಳ ನಾಶ, ಕತ್ತರಿಸಿರುವ ಕೆರೆಗಳ ಕೊಂಡಿ...ಹೀಗೆ ಹಲವು ಕಾರಣಗಳಿಂದ ಕೆರೆಗಳಲ್ಲಿ ನೀರು ಖಾಲಿಯಾಗುತ್ತಿದೆ.</p>.<p>ಜಿಲ್ಲೆಯ ಜನರ ಜೀವನಾಡಿಗಳೇ ಕೆರೆಗಳು. ಕೆರೆಗಳಲ್ಲಿ ನೀರಿದ್ದರೆ ಅಂತರ್ಜಲ ಅಭಿವೃದ್ಧಿಗೊಳ್ಳುತ್ತದೆ. ರೈತರಿಗೂ ಅನುಕೂಲ. ಜಿಲ್ಲಾಡಳಿತ ಕೆರೆಗಳ ಪುನರುಜ್ಜೀವನದ ಜೊತೆಗೆ ನೀರು ಕೆರೆಗಳಿಗೆ ಸರಾಗವಾಗಿ ಹರಿಯುವಂತೆ ಕ್ರಮವಹಿಸಬೇಕು ಎನ್ನುವುದು ಪ್ರಜ್ಞಾವಂತರು ಮತ್ತು ನೀರಾವರಿ ಹೋರಾಟಗಾರರ ಮನವಿ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260508-16-601480562</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರವೂ ಒಂದಾಗಿದೆ. ಬಯಲು ಸೀಮೆಯ ಈ ಜಿಲ್ಲೆಯಲ್ಲಿ ಕೆರೆಗಳಷ್ಟೇ ಹೆಚ್ಚಿವೆ. ಆದರೆ ಈ ಕೆರೆಗಳಲ್ಲಿ ನೀರು ಯಾವ ಪ್ರಮಾಣದಲ್ಲಿದೆ ಎಂದು ಗಮನಿಸಿದರೆ ನಿರಾಸೆ ಎದ್ದು ಕಾಣುತ್ತದೆ.</p>.<p>ಕೆರೆಗಳಲ್ಲಿ ನೀರಿಲ್ಲ. ಇದ್ದರೂ ಅಲ್ಪಸ್ವಲ್ಪವಷ್ಟೇ! ಬಹುತೇಕ ಕೆರೆಗಳು ನೀರಿಲ್ಲದೆ ಒಣಗುತ್ತಿದ್ದರೆ ಕೆಲವು ಕೆರೆಗಳಲ್ಲಿ ಅಲ್ಪಸ್ವಲ್ಪ ನೀರಿದೆ. ವಿಶೇಷವಾಗಿ ಬೇಸಿಗೆಯ ಈ ದಿನಗಳಲ್ಲಿ ಕೆರೆಗಳಲ್ಲಿ ನೀರು ಇದ್ದರೆ ಅನುಕೂಲವಾಗುತ್ತಿತ್ತು.</p>.<p>ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 203 ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 1,332 ಕೆರೆಗಳಿವೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಒಂದಿಷ್ಟು ಕೆರೆಗಳನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ಕೆರೆಗಳಲ್ಲಿ ನೀರು ವರ್ಷವಿಡೀ ಇರಬೇಕು. ಎಚ್.ಎನ್.ವ್ಯಾಲಿಯ ನೀರನ್ನು ಕೆಲವು ಕೆರೆಗಳಿಗೆ ಹರಿಸಲಾಗುತ್ತಿದೆ. ವ್ಯಾಲಿ ನೀರಿನ ಕಾರಣ ಆ ಕೆರೆಗಳಲ್ಲಿ ವರ್ಷ ಪೂರ್ಣ ನೀರು ಇರುತ್ತದೆ. ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕೆರೆಗಳಲ್ಲಿ ಪ್ರವಾಸೋದ್ಯಮ ಇಲಾಖೆಯು ಬೋಟಿಂಗ್ ನಡೆಸಲು ಅವಕಾಶ ಸಹ ನೀಡಿದೆ. ಹೀಗೆ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳಲ್ಲಿ ಸದ್ಯ ಶೇ 33.30ರಷ್ಟು ನೀರಿದೆ.</p>.<p>ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 1,332 ಕೆರೆಗಳು ಜಿಲ್ಲೆಯಲ್ಲಿವೆ. ಈ ಕೆರೆಗಳಲ್ಲಿ ಸದ್ಯ ಶೇ 15.33ರಷ್ಟು ಮಾತ್ರ ನೀರಿದೆ. ಬಹುತೇಕ ಜಿ.ಪಂ ಕೆರೆಗಳು ಬರಡಾಗಿವೆ. ಕೆಲವು ಕಡೆಗಳಲ್ಲಿ ನೀರಿದ್ದರೂ ಅದು ಅಲ್ಪ ಪ್ರಮಾಣ.</p>.<p>ನೀರಾವರಿ ವಿಚಾರವಾಗಿ ಮೂರು ದಶಕಗಳಿಂದಲೂ ಜಿಲ್ಲೆಯಲ್ಲಿ ಹೋರಾಟಗಳು ನಡೆಯುತ್ತಿವೆ. ಕೆರೆಗಳಿಗೆ ನೀರು ಹರಿಯುವ ರಾಜಕಾಲುವೆಗಳು, ಕಾಲುವೆಗಳನ್ನು ಪುನಶ್ಚೇತನಗೊಳಿಸಬೇಕು. ಆ ಮೂಲಕ ಕೆರೆಗಳನ್ನು ಪುನರುಜ್ಜೀವನಗೊಳಿಸಬೇಕು. ಇದರಿಂದ ಕೆರೆಗಳಲ್ಲಿ ನೀರಿನ ಸಂಗ್ರಹ ಹೆಚ್ಚುತ್ತದೆ ಎಂದು ನೀರಾವರಿ ಹೋರಾಟಗಾರರು ಪ್ರತಿಪಾದಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಇಂದಿಗೂ ರಾಜಕಾಲುವೆಗಳ ಒತ್ತುವರಿ ತೆರವು ಸೇರಿದಂತೆ ಕೆರೆಗಳ ಅಭಿವೃದ್ಧಿಗೆ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಗಳು ಆಗಿಲ್ಲ.</p>.<p>ಒಂದು ಕೆರೆ ತುಂಬಿ ಕೋಡಿ ಹರಿದರೆ ಆ ನೀರು ಮತ್ತೊಂದು ಕೆರೆಯತ್ತ ಮುಖ ಮಾಡುತ್ತದೆ. ಹೀಗೆ ಒಂದೊಂದು ಕೆರೆಗೂ ನೀರು ಹರಿವಿನ ವಿಚಾರವಾಗಿ ಪರಸ್ಪರ ಸಂಬಂಧವಿದೆ. ಆದರೆ ಈ ಪರಸ್ಪರ ಸಂಬಂಧದ ಕೊಂಡಿಗಳು ಕಡಿದಿವೆ. ಪರಿಣಾಮ ಮಳೆ ಬಿದ್ದರೂ ಕೆರೆಗಳು ತುಂಬುತ್ತಿಲ್ಲ.</p>.<p>ಹೂಳು ಸಹ ದೊಡ್ಡ ಪ್ರಮಾಣದಲ್ಲಿರುವುದು ಕೆರೆಗಳಲ್ಲಿನ ನೀರು ಬೇಗ ಖಾಲಿಯಾಗಲು ಪ್ರಮುಖ ಕಾರಣವಾಗಿದೆ. ಮಳೆ ಕೊರತೆ, ಹೂಳು, ಒತ್ತುವರಿ, ರಾಜಕಾಲವೆಗಳ ನಾಶ, ಕತ್ತರಿಸಿರುವ ಕೆರೆಗಳ ಕೊಂಡಿ...ಹೀಗೆ ಹಲವು ಕಾರಣಗಳಿಂದ ಕೆರೆಗಳಲ್ಲಿ ನೀರು ಖಾಲಿಯಾಗುತ್ತಿದೆ.</p>.<p>ಜಿಲ್ಲೆಯ ಜನರ ಜೀವನಾಡಿಗಳೇ ಕೆರೆಗಳು. ಕೆರೆಗಳಲ್ಲಿ ನೀರಿದ್ದರೆ ಅಂತರ್ಜಲ ಅಭಿವೃದ್ಧಿಗೊಳ್ಳುತ್ತದೆ. ರೈತರಿಗೂ ಅನುಕೂಲ. ಜಿಲ್ಲಾಡಳಿತ ಕೆರೆಗಳ ಪುನರುಜ್ಜೀವನದ ಜೊತೆಗೆ ನೀರು ಕೆರೆಗಳಿಗೆ ಸರಾಗವಾಗಿ ಹರಿಯುವಂತೆ ಕ್ರಮವಹಿಸಬೇಕು ಎನ್ನುವುದು ಪ್ರಜ್ಞಾವಂತರು ಮತ್ತು ನೀರಾವರಿ ಹೋರಾಟಗಾರರ ಮನವಿ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260508-16-601480562</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>