<p>ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರ ಹಾಗೂ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಸೋಮವಾರ ಸಂಜೆ ಕೃತಿಕಾ ಮಳೆ ಉತ್ತಮವಾಗಿ ಸುರಿಯಿತು. ಹಲವು ತಿಂಗಳುಗಳ ನಂತರ ಹೀಗೆ ಉತ್ತಮ ಮಳೆ ಕಂಡ ಚಿಕ್ಕಬಳ್ಳಾಪುರ ಜನರು ಹರ್ಷಗೊಂಡರು.</p>.<p>ಸುಮಾರು ಒಂದು ತಾಸು ಸುರಿದ ಮಳೆಗೆ ರಸ್ತೆಯಲ್ಲಿನ ಗುಂಡಿಗಳು, ಚರಂಡಿಗಳು ತುಂಬಿ ಹರಿದವು. ಮೊದಲ ಮಳೆ ಇಳೆಗೆ ತಂಪು ಸಹ ತಂದಿತು. ರಾತ್ರಿ 7.30ರ ಸುಮಾರಿಗೆ ಮಳೆ ನಿಂತಿತು.</p>.<p>ಮುಂಗಾರು ಚಟುವಟಿಕೆಗಳಿಗೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಳೆ ಸುರಿಯುವ ಮೂಲಕ ಕೃಷಿ ಚಟುವಟಿಕೆಗಳ ಸಿದ್ಧತೆಗೆ ಬಲ ನೀಡಿದೆ.</p>.<p>ಬಾಗೇಪಲ್ಲಿ: ಪಟ್ಟಣ ಮತ್ತು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಮಳೆ ಸುರಿತು. ಮಳೆ ನೀರು ರಸ್ತೆಗಳಲ್ಲಿ ಹರಿಯಿತು. ತಗ್ಗಿ ಪ್ರದೇಶಗಳು ಜಲಾವೃತಗೊಂಡವು.</p>.<p>ಮಳೆ ನೀರು ಚರಂಡಿಗಳಲ್ಲಿ ಹರಿದು ರಸ್ತೆಗಳ ಮೇಲೆ ಹರಿಯಿತು. ದ್ವಿಚಕ್ರ ವಾಹನಗಳ ಸವಾರರು ಮಳೆಯಿಂದ ಪರದಾಡಿದರು.</p>.<p>ಚಿಂತಾಮಣಿ: ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ನಗರದ ಜನರಿಗೆ ಸೋಮವಾರ ರಾತ್ರಿ ಸುರಿದ ಸಾಧಾರಣ ತುಂತರು ಮಳೆ ತಂಪೆರೆಯಿತು. ರಾತ್ರಿ ಸುಮಾರು 7ಆರಂಭವಾದ ಸೋನೆ ಮಳೆ ಸುಮಾರು ಒಂದು ಗಂಟೆ ಕಾಲ ಸುರಿಯಿತು.</p>.<p>ತುಂತರು ಮಳೆಯಿಂದ ನೀರು ಹರಿಯದಿದ್ದರೂ ಭೂಮಿ ತೇವವಾಗಿ ವಾತಾವರಣ ತಂಪಾಯಿತು. ಸುಮಾರು ದಿನಗಳಿಂದ ಬಿಸಿಲಿನ ಧಗೆಯಿಂದ ಚಡಪಡಿಸುತ್ತಿದ್ದ ಜನರು ಸ್ವಲ್ಪ ಕಾಲವಾದರೂ ತಂಪಿನ ವಾತಾವರಣದ ಅನುಭವ ಪಡೆದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-16-105191845</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರ ಹಾಗೂ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಸೋಮವಾರ ಸಂಜೆ ಕೃತಿಕಾ ಮಳೆ ಉತ್ತಮವಾಗಿ ಸುರಿಯಿತು. ಹಲವು ತಿಂಗಳುಗಳ ನಂತರ ಹೀಗೆ ಉತ್ತಮ ಮಳೆ ಕಂಡ ಚಿಕ್ಕಬಳ್ಳಾಪುರ ಜನರು ಹರ್ಷಗೊಂಡರು.</p>.<p>ಸುಮಾರು ಒಂದು ತಾಸು ಸುರಿದ ಮಳೆಗೆ ರಸ್ತೆಯಲ್ಲಿನ ಗುಂಡಿಗಳು, ಚರಂಡಿಗಳು ತುಂಬಿ ಹರಿದವು. ಮೊದಲ ಮಳೆ ಇಳೆಗೆ ತಂಪು ಸಹ ತಂದಿತು. ರಾತ್ರಿ 7.30ರ ಸುಮಾರಿಗೆ ಮಳೆ ನಿಂತಿತು.</p>.<p>ಮುಂಗಾರು ಚಟುವಟಿಕೆಗಳಿಗೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಳೆ ಸುರಿಯುವ ಮೂಲಕ ಕೃಷಿ ಚಟುವಟಿಕೆಗಳ ಸಿದ್ಧತೆಗೆ ಬಲ ನೀಡಿದೆ.</p>.<p>ಬಾಗೇಪಲ್ಲಿ: ಪಟ್ಟಣ ಮತ್ತು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಮಳೆ ಸುರಿತು. ಮಳೆ ನೀರು ರಸ್ತೆಗಳಲ್ಲಿ ಹರಿಯಿತು. ತಗ್ಗಿ ಪ್ರದೇಶಗಳು ಜಲಾವೃತಗೊಂಡವು.</p>.<p>ಮಳೆ ನೀರು ಚರಂಡಿಗಳಲ್ಲಿ ಹರಿದು ರಸ್ತೆಗಳ ಮೇಲೆ ಹರಿಯಿತು. ದ್ವಿಚಕ್ರ ವಾಹನಗಳ ಸವಾರರು ಮಳೆಯಿಂದ ಪರದಾಡಿದರು.</p>.<p>ಚಿಂತಾಮಣಿ: ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ನಗರದ ಜನರಿಗೆ ಸೋಮವಾರ ರಾತ್ರಿ ಸುರಿದ ಸಾಧಾರಣ ತುಂತರು ಮಳೆ ತಂಪೆರೆಯಿತು. ರಾತ್ರಿ ಸುಮಾರು 7ಆರಂಭವಾದ ಸೋನೆ ಮಳೆ ಸುಮಾರು ಒಂದು ಗಂಟೆ ಕಾಲ ಸುರಿಯಿತು.</p>.<p>ತುಂತರು ಮಳೆಯಿಂದ ನೀರು ಹರಿಯದಿದ್ದರೂ ಭೂಮಿ ತೇವವಾಗಿ ವಾತಾವರಣ ತಂಪಾಯಿತು. ಸುಮಾರು ದಿನಗಳಿಂದ ಬಿಸಿಲಿನ ಧಗೆಯಿಂದ ಚಡಪಡಿಸುತ್ತಿದ್ದ ಜನರು ಸ್ವಲ್ಪ ಕಾಲವಾದರೂ ತಂಪಿನ ವಾತಾವರಣದ ಅನುಭವ ಪಡೆದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-16-105191845</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>