<p>ಚಿಕ್ಕಬಳ್ಳಾಪುರ: ರಾಮ ನವಮಿ ಪ್ರಯುಕ್ತ ನಗರ ಹೊರವಲಯದ ಅಂಕಣಗೊಂದಿಯ ಬಯಲು ವೀರಾಂಜನೇಯ ದೇವಾಲಯದಲ್ಲಿ ಮಾರ್ಚ್ 28ರಿಂದ ಏ.4ರವರೆಗೆ ಲೋಕ ಕಲ್ಯಾಣಾರ್ಥ ರಾಮಕೋಟಿ ಜಪಯಜ್ಞ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಸಪ್ತಾಹ ಸಮಿತಿಯ ಪುರದಗಡ್ಡೆ ಪಿ.ಎನ್.ಕೃಷ್ಣಪ್ಪ ತಿಳಿಸಿದರು.</p>.<p>ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಇದು 10ನೇ ವರ್ಷದ ಸಪ್ತಾಹ. ಮಂಗಳಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ ಜಪಯಜ್ಞ ಸಪ್ತಾಹ ನಡೆಸಿಕೊಡುವರು ಎಂದರು.</p>.<p>ದಿಬ್ಬೂರು ಗ್ರಾಮದ ಯೋಗಿನಾರೇಯಣ ಭಜನಾ ಮಂಡಳಿ, ಪುರದಗಡ್ಡೆ ಯೋಗಿನಾರೇಯಣ ಭಜನಾಮಂಡಳಿ, ವೀರಾಂಜನೇಯಸ್ವಾಮಿ ಭಜನಾ ಮಂಡಳಿ, ದೊಡ್ಡತಮ್ಮನಹಳ್ಳಿ, ಚಲಕಾಯಲಪರ್ತಿ, ಲಕ್ಕಿನಾಯ್ಕನಹಳ್ಳಿ ಸೇರಿ 500ಕ್ಕೂ ಅಧಿಕ ಭಜನಾ ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.</p>.<p>ಸಪ್ತಾಹ ಸಮಿತಿ ಗೌರವಾಧ್ಯಕ್ಷ ಬಿ.ಎನ್.ನಾಗಭೂಷಣ್, ಉಪಾಧ್ಯಕ್ಷ ರಂಗಪ್ಪ, ನಾರಾಯಣಪ್ಪ, ಗೋಪಾಲಾಚಾರಿ, ಬ್ಯಾಂಕ್ ನಾರಾಯಣಸ್ವಾಮಿ, ಸುದರ್ಶನಾಚಾರಿ, ನರಸಿಂಹಯ್ಯ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260327-16-1699121082</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಬಳ್ಳಾಪುರ: ರಾಮ ನವಮಿ ಪ್ರಯುಕ್ತ ನಗರ ಹೊರವಲಯದ ಅಂಕಣಗೊಂದಿಯ ಬಯಲು ವೀರಾಂಜನೇಯ ದೇವಾಲಯದಲ್ಲಿ ಮಾರ್ಚ್ 28ರಿಂದ ಏ.4ರವರೆಗೆ ಲೋಕ ಕಲ್ಯಾಣಾರ್ಥ ರಾಮಕೋಟಿ ಜಪಯಜ್ಞ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಸಪ್ತಾಹ ಸಮಿತಿಯ ಪುರದಗಡ್ಡೆ ಪಿ.ಎನ್.ಕೃಷ್ಣಪ್ಪ ತಿಳಿಸಿದರು.</p>.<p>ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಇದು 10ನೇ ವರ್ಷದ ಸಪ್ತಾಹ. ಮಂಗಳಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ ಜಪಯಜ್ಞ ಸಪ್ತಾಹ ನಡೆಸಿಕೊಡುವರು ಎಂದರು.</p>.<p>ದಿಬ್ಬೂರು ಗ್ರಾಮದ ಯೋಗಿನಾರೇಯಣ ಭಜನಾ ಮಂಡಳಿ, ಪುರದಗಡ್ಡೆ ಯೋಗಿನಾರೇಯಣ ಭಜನಾಮಂಡಳಿ, ವೀರಾಂಜನೇಯಸ್ವಾಮಿ ಭಜನಾ ಮಂಡಳಿ, ದೊಡ್ಡತಮ್ಮನಹಳ್ಳಿ, ಚಲಕಾಯಲಪರ್ತಿ, ಲಕ್ಕಿನಾಯ್ಕನಹಳ್ಳಿ ಸೇರಿ 500ಕ್ಕೂ ಅಧಿಕ ಭಜನಾ ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.</p>.<p>ಸಪ್ತಾಹ ಸಮಿತಿ ಗೌರವಾಧ್ಯಕ್ಷ ಬಿ.ಎನ್.ನಾಗಭೂಷಣ್, ಉಪಾಧ್ಯಕ್ಷ ರಂಗಪ್ಪ, ನಾರಾಯಣಪ್ಪ, ಗೋಪಾಲಾಚಾರಿ, ಬ್ಯಾಂಕ್ ನಾರಾಯಣಸ್ವಾಮಿ, ಸುದರ್ಶನಾಚಾರಿ, ನರಸಿಂಹಯ್ಯ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260327-16-1699121082</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>