<p>ಚಿಂತಾಮಣಿ: ನಗರದ ಎಂ.ಜಿ.ರಸ್ತೆಯಲ್ಲಿ ಮೂರು ದಿನಗಳ ಸಡಗರ ಮತ್ತು ಸಂಭ್ರಮದ ದ್ರೌಪತಿ ಧರ್ಮರಾಯ ಕರಗ ಮಹೋತ್ಸವವು ಭಾನುವಾರ ರಾತ್ರಿ ಅಗ್ನಿಕುಂಡ ಮತ್ತು ವಸಂತೋತ್ಸವದೊಂದಿಗೆ ತೆರೆಕಂಡಿತು.</p>.<p>ಶನಿವಾರ ರಾತ್ರಿ 11 ಗಂಟೆಗೆ ಧರ್ಮರಾಯ ದೇವಸ್ಥಾದಲ್ಲಿ ವಿವಿಧ ದಾರ್ಮಿಕ ಕೈಂಕರ್ಯಗಳು ಹಾಗೂ ಪೂಜೆ ಬಳಿಕ ಕರಗ ಹೊತ್ತ ವಿಜಯಕುಮಾರ್ ದೇವಾಲಯದ ಮುಂದೆ ತಮಟೆಯ ತಾಳಕ್ಕೆ ತಕ್ಕಂತೆ ನೃತ್ಯ ಮಾಡಿ ನೆರೆದ ಸಾವಿರಾರು ಭಕ್ತರ ಮನತಣಿಸಿದರು.</p>.<p>ಕರಗವು ನಗರದ ವಿವಿಧ ಬಡಾವಣೆಗಳ ಪ್ರಮುಖ ರಸ್ತೆಗಳು, ವೃತ್ತಗಳ ಮೂಲಕ ಸಂಚರಿಸಿ ಭಾನುವಾರ ರಾತ್ರಿ ದೇವಾಲಯ ತಲುಪಿತು. ವೀರಕುಮಾರರು ಮತ್ತು ನೂರಾರು ಭಕ್ತರು ಸಹ ಹೂವಿನ ಕರಗವನ್ನು ಹಿಂಬಾಲಿಸಿದರು.</p>.<p>ನಗರದ ಎನ್.ಎನ್.ಟಿ ರಸ್ತೆಯ ಭಜನೆ ಮಂದಿರ, ನಾರಸಿಂಹಪೇಟೆಯ ಆಂಜನೇಯ ದೇವಾಲಯದ ಗರಡಿಮನೆ, ಗಂಗಾಭವಾನಿ ದೇವಾಲಯ ಬಳಿ ಕರಗವು ವಿಶೇಷ ನರ್ತನ ಮಾಡಿತು. ಕರಗ ಸಾಗಿದಡೆಯಲ್ಲಿ ಜನರ ಹರ್ಷೋದ್ಗಾರ, ಚಪ್ಪಾಳೆ ಮುಗಿಲುಮುಟ್ಟಿತು. ಭಕ್ತರು ಕೇಕೆ ಸಿಳ್ಳೆಗಳನ್ನು ಹಾಕಿ ಹುರಿದುಂಬಿಸಿದರು.</p>.<p>ಮಾರ್ಚ್ 26ರಂದು ಗುರುವಾರ ಆರಂಭವಾಗಿದ್ದ ಕರಗ ಮಹೋತ್ಸವದ ಕಾರ್ಯಕ್ರಮಗಳು ಭಾನುವಾರ ರಾತ್ರಿ ಅಗ್ನಿಕುಂಡ ಮತ್ತು ವಸಂತೋತ್ಸವದೊಂದಿಗೆ ಮುಕ್ತಾಯಗೊಂಡವು.</p>.<p>ನಗರದ ಚೆಂಗಲರಾಯ ನಾಯ್ಡು ಕುಟುಂಬ ಪ್ರತಿವರ್ಷದಂತೆ ಕರಗ ಮಹೋತ್ಸವ ನಡೆಸಿತು. ಕರಗದ ಅಂಗವಾಗಿ ದೇವಾಲಯಕ್ಕೆ ಹೂವಿನ ಅಲಂಕಾರ ಮತ್ತು ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಕರಗ ಸಂಚರಿಸುವ ರಸ್ತೆಗಳಲ್ಲಿ ಅನೇಕ ಕಡೆ ವಿಶೇಷವಾಗಿ ಬರಮಾಡಿಕೊಳ್ಳಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260331-16-1834073297</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಂತಾಮಣಿ: ನಗರದ ಎಂ.ಜಿ.ರಸ್ತೆಯಲ್ಲಿ ಮೂರು ದಿನಗಳ ಸಡಗರ ಮತ್ತು ಸಂಭ್ರಮದ ದ್ರೌಪತಿ ಧರ್ಮರಾಯ ಕರಗ ಮಹೋತ್ಸವವು ಭಾನುವಾರ ರಾತ್ರಿ ಅಗ್ನಿಕುಂಡ ಮತ್ತು ವಸಂತೋತ್ಸವದೊಂದಿಗೆ ತೆರೆಕಂಡಿತು.</p>.<p>ಶನಿವಾರ ರಾತ್ರಿ 11 ಗಂಟೆಗೆ ಧರ್ಮರಾಯ ದೇವಸ್ಥಾದಲ್ಲಿ ವಿವಿಧ ದಾರ್ಮಿಕ ಕೈಂಕರ್ಯಗಳು ಹಾಗೂ ಪೂಜೆ ಬಳಿಕ ಕರಗ ಹೊತ್ತ ವಿಜಯಕುಮಾರ್ ದೇವಾಲಯದ ಮುಂದೆ ತಮಟೆಯ ತಾಳಕ್ಕೆ ತಕ್ಕಂತೆ ನೃತ್ಯ ಮಾಡಿ ನೆರೆದ ಸಾವಿರಾರು ಭಕ್ತರ ಮನತಣಿಸಿದರು.</p>.<p>ಕರಗವು ನಗರದ ವಿವಿಧ ಬಡಾವಣೆಗಳ ಪ್ರಮುಖ ರಸ್ತೆಗಳು, ವೃತ್ತಗಳ ಮೂಲಕ ಸಂಚರಿಸಿ ಭಾನುವಾರ ರಾತ್ರಿ ದೇವಾಲಯ ತಲುಪಿತು. ವೀರಕುಮಾರರು ಮತ್ತು ನೂರಾರು ಭಕ್ತರು ಸಹ ಹೂವಿನ ಕರಗವನ್ನು ಹಿಂಬಾಲಿಸಿದರು.</p>.<p>ನಗರದ ಎನ್.ಎನ್.ಟಿ ರಸ್ತೆಯ ಭಜನೆ ಮಂದಿರ, ನಾರಸಿಂಹಪೇಟೆಯ ಆಂಜನೇಯ ದೇವಾಲಯದ ಗರಡಿಮನೆ, ಗಂಗಾಭವಾನಿ ದೇವಾಲಯ ಬಳಿ ಕರಗವು ವಿಶೇಷ ನರ್ತನ ಮಾಡಿತು. ಕರಗ ಸಾಗಿದಡೆಯಲ್ಲಿ ಜನರ ಹರ್ಷೋದ್ಗಾರ, ಚಪ್ಪಾಳೆ ಮುಗಿಲುಮುಟ್ಟಿತು. ಭಕ್ತರು ಕೇಕೆ ಸಿಳ್ಳೆಗಳನ್ನು ಹಾಕಿ ಹುರಿದುಂಬಿಸಿದರು.</p>.<p>ಮಾರ್ಚ್ 26ರಂದು ಗುರುವಾರ ಆರಂಭವಾಗಿದ್ದ ಕರಗ ಮಹೋತ್ಸವದ ಕಾರ್ಯಕ್ರಮಗಳು ಭಾನುವಾರ ರಾತ್ರಿ ಅಗ್ನಿಕುಂಡ ಮತ್ತು ವಸಂತೋತ್ಸವದೊಂದಿಗೆ ಮುಕ್ತಾಯಗೊಂಡವು.</p>.<p>ನಗರದ ಚೆಂಗಲರಾಯ ನಾಯ್ಡು ಕುಟುಂಬ ಪ್ರತಿವರ್ಷದಂತೆ ಕರಗ ಮಹೋತ್ಸವ ನಡೆಸಿತು. ಕರಗದ ಅಂಗವಾಗಿ ದೇವಾಲಯಕ್ಕೆ ಹೂವಿನ ಅಲಂಕಾರ ಮತ್ತು ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಕರಗ ಸಂಚರಿಸುವ ರಸ್ತೆಗಳಲ್ಲಿ ಅನೇಕ ಕಡೆ ವಿಶೇಷವಾಗಿ ಬರಮಾಡಿಕೊಳ್ಳಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260331-16-1834073297</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>