<p>ಚಿಂತಾಮಣಿ: ಬೇಸಿಗೆಯ ಸುಡು ಬಿಸಿಲು, ಒಣ ಸನ್ನಿವೇಶ ಹಾಗೂ ಹವಾಮಾನದ ವೈಪರಿತ್ಯದ ಪರಿಣಾಮ ಮಾವಿನ ತೋಟಗಳು ಅನೇಕ ರೀತಿಯ ವಿಷಮ ಪರಿಸ್ಥಿತಿ ಎದುರಿಸುತ್ತಿವೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಎಂ.ಗಾಯಿತ್ರಿ ತಿಳಿಸಿದ್ದಾರೆ.</p>.<p>ವಾತಾವರಣದಲ್ಲಿ ಉಷ್ಣಾಂಶ ಏರಿದಂತೆ ಮತ್ತು ಒಣ ಸನ್ನಿವೇಶ ಸೃಷ್ಟಿಯಾದಂತೆಲ್ಲ ಥಿಮ್ಸ್ ಹುಳು ಮತ್ತು ಜಿಗಿಹುಳುಗಳು ಮಾವಿನ ಮರಗಳಿಗೆ ಹಾನಿಯುಂಟು ಮಾಡುತ್ತಿರುವುದು ಕಂಡುಬರುತ್ತಿದೆ. ಕಟ್ಟಿದ ಕಾಯಿ ಅಧಿಕ ತಾಪಮಾನದಿಂದ ಹೆಚ್ಚಿನ ಪ್ರಮಾಣದಲ್ಲಿ ಉದುರುತ್ತಿವೆ. ಎಲ್ಲ ತಳಿಗಳ ಮಾವಿನಲ್ಲಿ ಈ ಸಮಸ್ಯೆ ಕಂಡುಬಂದಿದೆ. ಬಾದಾಮಿ ತಳಿಯಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಹೆಚ್ಚಿನ ಹಾನಿ ಮತ್ತು ನಷ್ಟ ತಡೆಗಟ್ಟಲು ಮಾವು ಬೆಳೆಗಾರರು ನಿರ್ವಹಣಾ ಕ್ರಮಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು ಎಂದು ಅವರು ಬೆಳೆಗಾರರಿಗೆ ಸಲಹೆ ನೀಡಿದ್ದಾರೆ.</p>.<p>ಥ್ರಿಪ್ಸ್ ಹಾಗೂ ಜಿಗಿ ಹುಳುಗಳನ್ನು ನಾಶಪಡಿಸಲು ಬೆಳೆಗಾರರು ಇಮಿಡಾ ಕ್ಲೋರೋಫ್ರೈಡ್ ಅರ್ಧ ಎಂ.ಎಲ್, ಲ್ಯಾಮ್ಡಾ ಕ್ಯಾಲೋತ್ರಿನ್ 1 ಎಂ.ಎಲ್, ಕ್ಲೋರೊ ಫ್ರೈಪೋಸ್ 2 ಎಂ.ಎಲ್ ಅನ್ನು ಒಂದು ಲೀಟರ್ ನೀರಿಗೆ ಬೆರಸಿ ಸಿಂಪಡಣೆ ಮಾಡಬೇಕು ಎಂದು ತಿಳಿಸಿದ್ದಾರೆ.</p>.<p>ಕಚ್ಚಿದ ಹರಳುಗಳು ಹಾಗೂ ಚಿಕ್ಕಕಾಯಿಗಳು ಉದುರುವುದನ್ನು ತಡೆಯಲು ನೀರುಣಿಸಬೇಕು. ಕಾಯಿಗಳು ಚಿಕ್ಕದಾಗಿರುವ ಹಂತದಲ್ಲಿ ಪ್ಲ್ಯಾನೋಫಿಕ್ಸ್ ಅರ್ಧ ಎಂ.ಎಲ್ ರಸಾಯನವನ್ನು ಒಂದು ಲೀಟರ್ ನೀರಿನಲ್ಲಿ ಕರಗಿಸಿ ಕಟ್ಟಿದ ಕಾಯಿಗಳಿಗೆ ಸಿಂಪಡಿಸುವುದರಿಂದ ಉದುರುವಿಕೆ ತಡೆಗಟ್ಟಬಹುದು ಎಂದು ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260407-16-1289488729</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಂತಾಮಣಿ: ಬೇಸಿಗೆಯ ಸುಡು ಬಿಸಿಲು, ಒಣ ಸನ್ನಿವೇಶ ಹಾಗೂ ಹವಾಮಾನದ ವೈಪರಿತ್ಯದ ಪರಿಣಾಮ ಮಾವಿನ ತೋಟಗಳು ಅನೇಕ ರೀತಿಯ ವಿಷಮ ಪರಿಸ್ಥಿತಿ ಎದುರಿಸುತ್ತಿವೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಎಂ.ಗಾಯಿತ್ರಿ ತಿಳಿಸಿದ್ದಾರೆ.</p>.<p>ವಾತಾವರಣದಲ್ಲಿ ಉಷ್ಣಾಂಶ ಏರಿದಂತೆ ಮತ್ತು ಒಣ ಸನ್ನಿವೇಶ ಸೃಷ್ಟಿಯಾದಂತೆಲ್ಲ ಥಿಮ್ಸ್ ಹುಳು ಮತ್ತು ಜಿಗಿಹುಳುಗಳು ಮಾವಿನ ಮರಗಳಿಗೆ ಹಾನಿಯುಂಟು ಮಾಡುತ್ತಿರುವುದು ಕಂಡುಬರುತ್ತಿದೆ. ಕಟ್ಟಿದ ಕಾಯಿ ಅಧಿಕ ತಾಪಮಾನದಿಂದ ಹೆಚ್ಚಿನ ಪ್ರಮಾಣದಲ್ಲಿ ಉದುರುತ್ತಿವೆ. ಎಲ್ಲ ತಳಿಗಳ ಮಾವಿನಲ್ಲಿ ಈ ಸಮಸ್ಯೆ ಕಂಡುಬಂದಿದೆ. ಬಾದಾಮಿ ತಳಿಯಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಹೆಚ್ಚಿನ ಹಾನಿ ಮತ್ತು ನಷ್ಟ ತಡೆಗಟ್ಟಲು ಮಾವು ಬೆಳೆಗಾರರು ನಿರ್ವಹಣಾ ಕ್ರಮಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು ಎಂದು ಅವರು ಬೆಳೆಗಾರರಿಗೆ ಸಲಹೆ ನೀಡಿದ್ದಾರೆ.</p>.<p>ಥ್ರಿಪ್ಸ್ ಹಾಗೂ ಜಿಗಿ ಹುಳುಗಳನ್ನು ನಾಶಪಡಿಸಲು ಬೆಳೆಗಾರರು ಇಮಿಡಾ ಕ್ಲೋರೋಫ್ರೈಡ್ ಅರ್ಧ ಎಂ.ಎಲ್, ಲ್ಯಾಮ್ಡಾ ಕ್ಯಾಲೋತ್ರಿನ್ 1 ಎಂ.ಎಲ್, ಕ್ಲೋರೊ ಫ್ರೈಪೋಸ್ 2 ಎಂ.ಎಲ್ ಅನ್ನು ಒಂದು ಲೀಟರ್ ನೀರಿಗೆ ಬೆರಸಿ ಸಿಂಪಡಣೆ ಮಾಡಬೇಕು ಎಂದು ತಿಳಿಸಿದ್ದಾರೆ.</p>.<p>ಕಚ್ಚಿದ ಹರಳುಗಳು ಹಾಗೂ ಚಿಕ್ಕಕಾಯಿಗಳು ಉದುರುವುದನ್ನು ತಡೆಯಲು ನೀರುಣಿಸಬೇಕು. ಕಾಯಿಗಳು ಚಿಕ್ಕದಾಗಿರುವ ಹಂತದಲ್ಲಿ ಪ್ಲ್ಯಾನೋಫಿಕ್ಸ್ ಅರ್ಧ ಎಂ.ಎಲ್ ರಸಾಯನವನ್ನು ಒಂದು ಲೀಟರ್ ನೀರಿನಲ್ಲಿ ಕರಗಿಸಿ ಕಟ್ಟಿದ ಕಾಯಿಗಳಿಗೆ ಸಿಂಪಡಿಸುವುದರಿಂದ ಉದುರುವಿಕೆ ತಡೆಗಟ್ಟಬಹುದು ಎಂದು ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260407-16-1289488729</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>