ಶಿಡ್ಲಘಟ್ಟ: ‘ಕೊರೊನಾ ದೊಡ್ಡ ರೋಗವಲ್ಲ. ಅದಕ್ಕೆ ಹೆದರುವ ಅಗತ್ಯ ಇಲ್ಲ. ನೆಗಡಿ, ಕೆಮ್ಮು, ಜ್ವರದಂತೆ ಬಂದು ಹೋಗುವ ಸಾಮಾನ್ಯ ವೈರಲ್ ಫೀವರ್. ಪೌಷ್ಠಿಕ ಆಹಾರ ಸೇವಿಸಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು, ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿದ್ದರೆ ಸಾಕು’ ಎನ್ನುತ್ತಾರೆ ಕೋವಿಡ್ನಿಂದ ಗುಣಮುಖರಾಗಿರುವ ತಾಲ್ಲೂಕಿನ ಮೇಲೂರಿನ ಎಲ್.ಜಮುನಾ ಧರ್ಮೇಂದ್ರ.