ನಾಲ್ಕು ಮಂದಿ ಸ್ನೇಹಿತರ ಜತೆ ಅವರು ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದರು. ಈ ಗುಂಪಿನಲ್ಲಿದ್ದ ಸ್ನೇಹಿತನ ಜನ್ಮದಿನ ಆಚರಿಸಿದ್ದರು. ನಂತರ ಹಿನ್ನೀರಿನಲ್ಲಿ ಈಜಲು ಮುಂದಾಗಿದ್ದು ಈ ವೇಳೆ ಅವಘಡ ನಡೆದಿದೆ. ಕತ್ತಲಾದ ಕಾರಣ ಶವವನ್ನು ಹೊರತೆಗೆಯಲು ಸಾಧ್ಯವಾಗಿರಲಿಲ್ಲ. ಶನಿವಾರ ಬೆಳಿಗ್ಗೆ ಅಗ್ನಿಶಾಮಕ ದಳದ ಅಧಿಕಾರಿಗಳು ಶವವನ್ನು ಹೊರ ತೆಗೆದರು. ನಂದಿಗಿರಿಧಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.