ಬೆಚ್ಚಿ ಬಿದ್ದ ಜನ: ತಾಲ್ಲೂಕಿನಲ್ಲಿ ಹಲವಾರು ದಿನಗಳಿಂದ ಯಾವುದೇ ಗಲಾಟೆಗಳು ಇಲ್ಲದೇ ಶಾಂತಿಯುತ ವಾತಾವರಣ ಮೂಡಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಪುಡಿರೌಡಿಗಳು ಸೃಷ್ಠಿ ಆಗಿ, ಕಾನೂನುಗಳ ಭಯ ಇಲ್ಲದೇ ಕಳ್ಳತನ, ಡಕಾಯಿತಿ, ಧರೋಡೆ, ಗಲಾಟೆಗಳು, ತೀವ್ರ ಹಲ್ಲೆ ಮಾಡಲು ಮುಂದಾಗಿರುವುದು ಪಟ್ಟಣದ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.