ರಾತ್ರಿ ನಡೆದ ಈ ಹಲ್ಲೆ ಪ್ರಕರಣ ನಾಗರಿಕರನ್ನು ಬೆಚ್ಚಿ ಬೀಳಿಸಿತ್ತು. ನಗರದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಕರಣ ನಡೆದಿದ್ದು ಜನರು ಆತಂಕಗೊಂಡಿದ್ದರು. ಭಾನುವಾರ ರಾತ್ರಿಯೇ ಗಾಯಾಳುಗಳನ್ನು ಭೇಟಿ ಮಾಡಿದ ಎಸ್ಪಿ ಡಿ.ಎಲ್.ನಾಗೇಶ್, ಆರೋಪಿ ಪತ್ತೆಗೆ ಈಗಾಗಲೇ
ತನಿಖೆ ಆರಂಭಿಸಲಾಗಿದೆ
ಎಂದಿದ್ದರು. ನಗರದ ವಿವಿಧ ಭಾಗಗಳಲ್ಲಿನ ಸಿಸಿ ಟಿವಿ ಕ್ಯಾಮೆರಾದಲ್ಲಿನ ಅಡಕವಾಗಿದ್ದ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸಿದ್ದರು.
ಬೆಳಗಿನ ಜಾವದಲ್ಲಿ ಆರೋಪಿ ಅರ್ಜುನನ್ನು ತಿಪ್ಪೇನಹಳ್ಳಿ ಬಳಿ ಪೊಲೀಸರು
ಬಂಧಿಸಿದ್ದಾರೆ