ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಕುವಿನಿಂದ ಹಲ್ಲೆ; ಆರೋಪಿ ಬಂಧನ

Last Updated 2 ಆಗಸ್ಟ್ 2022, 2:41 IST
ಅಕ್ಷರ ಗಾತ್ರ

ಚಿಕ್ಕಬಳ್ಳಾ‍ಪುರ: ನಗರದ ಬಜಾರ್ ರಸ್ತೆ, ಬಲಮುರಿ ವೃತ್ತದ ಬಳಿ ಭಾನುವಾರ ರಾತ್ರಿ ಹಲವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ ಆರೋಪಿ ಅರ್ಜುನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ರಾತ್ರಿ ನಡೆದ ಈ ಹಲ್ಲೆ ಪ್ರಕರಣ ನಾಗರಿಕರನ್ನು ಬೆಚ್ಚಿ ಬೀಳಿಸಿತ್ತು. ನಗರದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಕರಣ ನಡೆದಿದ್ದು ಜನರು ಆತಂಕಗೊಂಡಿದ್ದರು. ಭಾನುವಾರ ರಾತ್ರಿಯೇ ಗಾಯಾಳುಗಳನ್ನು ಭೇಟಿ ಮಾಡಿದ ಎಸ್ಪಿ ಡಿ.ಎಲ್.ನಾಗೇಶ್, ಆರೋಪಿ ಪತ್ತೆಗೆ ಈಗಾಗಲೇ
ತನಿಖೆ ಆರಂಭಿಸಲಾಗಿದೆ
ಎಂದಿದ್ದರು. ನಗರದ ವಿವಿಧ ಭಾಗಗಳಲ್ಲಿನ ಸಿಸಿ ಟಿವಿ ಕ್ಯಾಮೆರಾದಲ್ಲಿನ ಅಡಕವಾಗಿದ್ದ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸಿದ್ದರು.
ಬೆಳಗಿನ ಜಾವದಲ್ಲಿ ಆರೋಪಿ ಅರ್ಜುನನ್ನು ತಿಪ್ಪೇನಹಳ್ಳಿ ಬಳಿ ಪೊಲೀಸರು
ಬಂಧಿಸಿದ್ದಾರೆ

ಅರ್ಜುನ್ ಮೇಲೆ ಈ ಹಿಂದೆಯೂ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ರೌಡಿ ಪಟ್ಟಿಯಲ್ಲಿ ಹೆಸರು ದಾಖಲಾಗಿತ್ತು. ತೀವ್ರ ಮದ್ಯವ್ಯಸನಿ ಆಗಿದ್ದ ಆತ ಇತ್ತೀಚೆಗೆ ಮನೆಯಿಂದ ದೂರವಾಗಿದ್ದ ಎಂದು ಮೂಲಗಳು
ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT