‘ಕಳೆದ 10 ವರ್ಷಗಳಿಂದ ಕೆರೆಯಲ್ಲಿ ನೀರು ಇರಲಿಲ್ಲ. ಕಳೆದ ಎರಡು ವರ್ಷದಿಂದ ಕೆರೆಯಲ್ಲಿ ನೀರಿದೆ. ನೀರು ಪೂರೈಕೆಗಾಗಿ ಲಕ್ಷಾಂತರ ರೂ ಖರ್ಚು ಮಾಡಲಾಗುತ್ತಿತ್ತು. ಕೆರೆಗೆ ನೀರು ಬಂದಿರುವುದರಿಂದ ನಗರಸಭೆಗೆ ಹಣ ಉಳಿತಾಯವಾಗಿದೆ, ಜನರಿಗೂ ಅನುಕೂಲವಾಗಿದೆ. ನಗರದ ಅಗ್ರಹಾರ, ನೆಕ್ಕುಂದಿ ಸೇರಿದಂತೆ ಹಲವಾರು ವಾರ್ಡ್ಗಳಿಗೆ ಈ ಕೆರೆಯಿಂದ ನೀರು ಪೂರೈಕೆಯಾಗುತ್ತಿತ್ತು. ನೀರು ವ್ಯರ್ಥವಾಗಿ ಹರಿದುಹೋದರೆ ನಗರಸಭೆ ನೀರಿನ ಟ್ಯಾಂಕರ್ಗಳಿಗಾಗಿ ಲಕ್ಷಾಂತರ ರೂ ಖರ್ಚು ಮಾಡಬೇಕಾಗುತ್ತದೆ’ ಎಂದರು.