‘ಪ್ರಸಕ್ತ ಬೇಸಿಗೆ ರಜೆ ಮುಗಿದ ಬಳಿಕ ಜೂನ್–ನವೆಂಬರ್ ಒಳಗಾಗಿ ಉದ್ಯಾನದಲ್ಲಿ ಆಲಂಕಾರಿಕ ಗಿಡಗಳನ್ನು ನಾಟಿ ಮಾಡಲಾಗುವುದು. ಕೃಷ್ಣಮೃಗ, ನವಿಲು, ಕೊಕ್ಕರೆ, ಹಂಸ, ಮೇಕೆ, ಆಡು ಸೇರಿದಂತೆ ಪ್ರಾಣಿ, ಪಕ್ಷಿಗಳ ಆಕರ್ಷಕ ಹೊಸ ಮೂರ್ತಿಗಳನ್ನು ಇಡಲಾಗುವುದು. ಸದ್ಯದ ಮಟ್ಟಿಗೆ ಇದ್ದ ಮೂರ್ತಿಗಳನ್ನೇ ಸರಿಪಡಿಸಿ ಇಡಲಾಗಿದೆ’ ಎಂದು ಎಂ.ಎನ್.ಮಾಳಗೇರ ತಿಳಿಸಿದರು