ಚಿಕ್ಕಬಳ್ಳಾಪುರ: ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಜಿಲ್ಲಾ ಘಟಕಕ್ಕೆ ಮೂರ್ತಿ ನರ್ಸಿಂಗ್ ಹೊಂ ವೈದ್ಯ ಡಾ.ಪ್ರಶಾಂತ್ ಎಸ್.ಮೂರ್ತಿ ಅವರು ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ನಗರದಲ್ಲಿ ಮಂಗಳವಾರ ನಡೆದ ಐಎಂಎ ಜಿಲ್ಲಾ ಘಟಕದ ಸರ್ವ ಸದಸ್ಯರ ಸಭೆಯಲ್ಲಿ ಉಪಾಧ್ಯಕ್ಷರಾಗಿ ಡಾ.ಡಿ.ಅನಿತಾ, ಡಾ.ಪಿ.ವಿ ರಮೇಶ್, ಕಾರ್ಯದರ್ಶಿಯಾಗಿ ಡಾ.ಎಚ್.ಎಸ್.ಮಧುವನ್, ಜಂಟಿ ಕಾರ್ಯದರ್ಶಿಯಾಗಿ ಡಾ.ಹರಿಣಿ ಅರ್ಜುನ್ ಹಾಗೂ ಖಜಾಂಚಿಯಾಗಿ ಡಾ.ಕೆ.ಅಜಿತ್ ಅವರನ್ನು ಆಯ್ಕೆ ಮಾಡಲಾಯಿತು.